HindiVyakran

  • नर्सरी निबंध
  • सूक्तिपरक निबंध
  • सामान्य निबंध
  • दीर्घ निबंध
  • संस्कृत निबंध
  • संस्कृत पत्र
  • संस्कृत व्याकरण
  • संस्कृत कविता
  • संस्कृत कहानियाँ
  • संस्कृत शब्दावली
  • पत्र लेखन
  • संवाद लेखन
  • जीवन परिचय
  • डायरी लेखन
  • वृत्तांत लेखन
  • सूचना लेखन
  • रिपोर्ट लेखन
  • विज्ञापन

Header$type=social_icons

  • commentsSystem

ಶಿಕ್ಷಕರ ದಿನಾಚರಣೆ ಪ್ರಬಂಧ Essay on Teachers day in Kannada Language

Essay on Teachers day in Kannada Language: In this article, we are providing ಶಿಕ್ಷಕರ ದಿನಾಚರಣೆ ಪ್ರಬಂಧ and ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಜೀವನ ಚರಿತ್ರೆ for students and teachers. Students can use this Dr. Sarvapalli Radhakrishnan Biography in Kannada Language / Teachers day kannada essay to complete their homework. ರಾಧಾಕೃಷ್ಣನ್ ಒಳ್ಳೆಯ ವಾಗಿ ಶ್ರೇಷ್ಠ ಶಿಕ್ಷಕ, ಅಪರೂಪದ ತತ್ವಜ್ಞಾನಿ. ಈ ಆದರ್ಶ ಶಿಕ್ಷಕನ ಜನ್ಮದಿನವನ್ನು ಭಾರತದಲ್ಲಿ “ಶಿಕ್ಷಕರ ದಿನ” ಎಂದು ಆಚರಿಸಲಾಗುತ್ತಿದೆ. ರಾಧಾಕೃಷ್ಣನ್ 1888 ಸೆಪ್ಟೆಂಬರ್ 5 ರಂದು ಚಿತ್ತೂರು ಜಿಲ್ಲೆಯ ಪವಿತ್ರ ಕ್ಷೇತ್ರ “ತಿರುತನಿ'ಯಲ್ಲಿ ಜನಿಸಿದರು. ಸರ್ವಪಲ್ಲಿ ಇವರ ಮನೆತನದ ಹೆಸರು. ಅವರಿಗೆ ಬಾಲ್ಯದಲ್ಲಿ ಆಟಕ್ಕಿಂತ ದೈವಾರಾಧನೆ, ಅಧ್ಯಾತ್ಮದಲ್ಲಿ ಒಲವು, ಪುಸ್ತಕಗಳೇ ಅವರ ಸಂಗಾತಿ. ಎಂಟು ವರ್ಷ ಕ್ರೈಸ್ತ ಸೇವಾಸಂಘದ ಶಾಲೆಯಲ್ಲಿ, ಅನಂತರ ಮದರಾಸಿನ ಕ್ರಿಶ್ಚಿಯನ್ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡಿದರು. Read also : Mahatma Gandhi Essay in Kannada Language ರಾಧಾಕೃಷ್ಣನ್‌ರ ಅಪಾರ ಪಾಂಡಿತ್ಯಕ್ಕೆ ಮನ್ನಣೆ ಎಂಬಂತೆ ಅವರನ್ನು ಹಿರಿಯ ವಿಶ್ವವಿದ್ಯಾನಿಲಯಗಳಲ್ಲಿ ಒಂದಾದ ಆಕ್ಸ್‌ಫರ್ಡ್‌ನಲ್ಲಿ ಪೌರಾಸ್ತ್ರ ಧರ್ಮಗಳು ಮತ್ತು ನೀತಿಶಾಸ್ತ್ರದ ಪ್ರಾಧ್ಯಾಪಕರಾಗಿ ನಿಯೋಜಿಸಲಾಯಿತು. Read also : Essay on Rajendra Prasad in Kannada Language

ಶಿಕ್ಷಕರ ದಿನಾಚರಣೆ ಪ್ರಬಂಧ Essay on Teachers day in Kannada Language

100+ Social Counters$type=social_counter

  • fixedSidebar
  • showMoreText

/gi-clock-o/ WEEK TRENDING$type=list

  • गम् धातु के रूप संस्कृत में – Gam Dhatu Roop In Sanskrit गम् धातु के रूप संस्कृत में – Gam Dhatu Roop In Sanskrit यहां पढ़ें गम् धातु रूप के पांचो लकार संस्कृत भाषा में। गम् धातु का अर्थ होता है जा...
  • दो मित्रों के बीच परीक्षा को लेकर संवाद - Do Mitro ke Beech Pariksha Ko Lekar Samvad Lekhan दो मित्रों के बीच परीक्षा को लेकर संवाद लेखन : In This article, We are providing दो मित्रों के बीच परीक्षा को लेकर संवाद , परीक्षा की तैयार...

' border=

RECENT WITH THUMBS$type=blogging$m=0$cate=0$sn=0$rm=0$c=4$va=0

  • 10 line essay
  • 10 Lines in Gujarati
  • Aapka Bunty
  • Aarti Sangrah
  • Akbar Birbal
  • anuched lekhan
  • asprishyata
  • Bahu ki Vida
  • Bengali Essays
  • Bengali Letters
  • bengali stories
  • best hindi poem
  • Bhagat ki Gat
  • Bhagwati Charan Varma
  • Bhishma Shahni
  • Bhor ka Tara
  • Boodhi Kaki
  • Chandradhar Sharma Guleri
  • charitra chitran
  • Chief ki Daawat
  • Chini Feriwala
  • chitralekha
  • Chota jadugar
  • Claim Kahani
  • Dairy Lekhan
  • Daroga Amichand
  • deshbhkati poem
  • Dharmaveer Bharti
  • Dharmveer Bharti
  • Diary Lekhan
  • Do Bailon ki Katha
  • Dushyant Kumar
  • Eidgah Kahani
  • Essay on Animals
  • festival poems
  • French Essays
  • funny hindi poem
  • funny hindi story
  • German essays
  • Gujarati Nibandh
  • gujarati patra
  • Guliki Banno
  • Gulli Danda Kahani
  • Haar ki Jeet
  • Harishankar Parsai
  • hindi grammar
  • hindi motivational story
  • hindi poem for kids
  • hindi poems
  • hindi rhyms
  • hindi short poems
  • hindi stories with moral
  • Information
  • Jagdish Chandra Mathur
  • Jahirat Lekhan
  • jainendra Kumar
  • jatak story
  • Jayshankar Prasad
  • Jeep par Sawar Illian
  • jivan parichay
  • Kashinath Singh
  • kavita in hindi
  • Kedarnath Agrawal
  • Khoyi Hui Dishayen
  • Kya Pooja Kya Archan Re Kavita
  • Madhur madhur mere deepak jal
  • Mahadevi Varma
  • Mahanagar Ki Maithili
  • Main Haar Gayi
  • Maithilisharan Gupt
  • Majboori Kahani
  • malayalam essay
  • malayalam letter
  • malayalam speech
  • malayalam words
  • Mannu Bhandari
  • Marathi Kathapurti Lekhan
  • Marathi Nibandh
  • Marathi Patra
  • Marathi Samvad
  • marathi vritant lekhan
  • Mohan Rakesh
  • Mohandas Naimishrai
  • MOTHERS DAY POEM
  • Narendra Sharma
  • Nasha Kahani
  • Neeli Jheel
  • nursery rhymes
  • odia letters
  • Panch Parmeshwar
  • panchtantra
  • Parinde Kahani
  • Paryayvachi Shabd
  • Poos ki Raat
  • Portuguese Essays
  • Punjabi Essays
  • Punjabi Letters
  • Punjabi Poems
  • Raja Nirbansiya
  • Rajendra yadav
  • Rakh Kahani
  • Ramesh Bakshi
  • Ramvriksh Benipuri
  • Rani Ma ka Chabutra
  • Russian Essays
  • Sadgati Kahani
  • samvad lekhan
  • Samvad yojna
  • Samvidhanvad
  • Sandesh Lekhan
  • sanskrit biography
  • Sanskrit Dialogue Writing
  • sanskrit essay
  • sanskrit grammar
  • sanskrit patra
  • Sanskrit Poem
  • sanskrit story
  • Sanskrit words
  • Sara Akash Upanyas
  • Savitri Number 2
  • Shankar Puntambekar
  • Sharad Joshi
  • Shatranj Ke Khiladi
  • short essay
  • spanish essays
  • Striling-Pulling
  • Subhadra Kumari Chauhan
  • Subhan Khan
  • Suchana Lekhan
  • Sudha Arora
  • Sukh Kahani
  • suktiparak nibandh
  • Suryakant Tripathi Nirala
  • Swarg aur Prithvi
  • Tasveer Kahani
  • Telugu Stories
  • UPSC Essays
  • Usne Kaha Tha
  • Vinod Rastogi
  • Vrutant lekhan
  • Wahi ki Wahi Baat
  • Yahi Sach Hai kahani
  • Yoddha Kahani
  • Zaheer Qureshi
  • कहानी लेखन
  • कहानी सारांश
  • तेनालीराम
  • मेरी माँ
  • लोककथा
  • शिकायती पत्र
  • हजारी प्रसाद द्विवेदी जी
  • हिंदी कहानी

RECENT$type=list-tab$date=0$au=0$c=5

Replies$type=list-tab$com=0$c=4$src=recent-comments, random$type=list-tab$date=0$au=0$c=5$src=random-posts, /gi-fire/ year popular$type=one.

  • अध्यापक और छात्र के बीच संवाद लेखन - Adhyapak aur Chatra ke Bich Samvad Lekhan अध्यापक और छात्र के बीच संवाद लेखन : In This article, We are providing अध्यापक और विद्यार्थी के बीच संवाद लेखन and Adhyapak aur Chatra ke ...

' border=

Join with us

Footer Logo

Footer Social$type=social_icons

  • loadMorePosts

KannadaStudy No1 Kannada Education Website

  • Information
  • ಜೀವನ ಚರಿತ್ರೆ

ಶಿಕ್ಷಕರ ಬಗ್ಗೆ ಪ್ರಬಂಧ | Essay On Teacher in Kannada

ಶಿಕ್ಷಕರ ಬಗ್ಗೆ ಪ್ರಬಂಧ Essay On Teacher Shikshakara Bagge Prabandha in Kannada

ಶಿಕ್ಷಕರ ಬಗ್ಗೆ ಪ್ರಬಂಧ

Essay On Teacher in Kannada

ಈ ಲೇಖನಿಯಲ್ಲಿ ಶಿಕ್ಷಕರ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ನಮ್ಮ Post ನಲ್ಲಿ ನೀಡಲಾಗಿದೆ.

ಶಿಕ್ಷಕ ಒಂದು ಮಗುವಿನ ಭವಿಷ್ಯದ ರಕ್ಷಕನಾಗಿರುತ್ತಾನೆ. ಶಿಕ್ಷಕರು ಮಕ್ಕಳನ್ನು ಜ್ಞಾನವಂತರನ್ನಾಗಿ ಮತ್ತು ಸುಸಂಸ್ಕೃತರನ್ನಾಗಿ ಮಾಡುವವರು. ಒಬ್ಬ ಶಿಕ್ಷಕನು ದೇವರು ನೀಡಿದ ಸುಂದರವಾದ ಕೊಡುಗೆಯಾಗಿದೆ ಏಕೆಂದರೆ ದೇವರು ಇಡೀ ಪ್ರಪಂಚದ ಸೃಷ್ಟಿಕರ್ತ ಮತ್ತು ಶಿಕ್ಷಕ ಇಡೀ ರಾಷ್ಟ್ರದ ಸೃಷ್ಟಿಕರ್ತ. ಒಬ್ಬ ಶಿಕ್ಷಕನು ವಿದ್ಯಾರ್ಥಿಯ ಜೀವನದಲ್ಲಿ ಪ್ರಮುಖ ಪಾತ್ರವನ್ನು ವಹಿಸಿರುತ್ತಾನೆ.

ವಿಷಯ ವಿವರಣೆ

ಹಿಂದಿನ ಕಾಲದಲ್ಲಿ ಶಿಕ್ಷಕರನ್ನು ಗುರುಗಳೆಂದು ಕರೆಯುತ್ತಿದ್ದರು. ಸಂಸೃತದಲ್ಲಿ ಗುರು ಎಂದರೆ ಕತ್ತಲೆಯನ್ನು ಹೋಗಲಾಡಿಸುವವನು ಎಂದರ್ಥ. ಹಾಗಾಗಿ ಗುರುವಿಗೆ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡಲಾಗಿದೆ. ದೇಶದ ಭವಿಷ್ಯದ ಪೀಳಿಗೆಯನ್ನು ತಮ್ಮ ಜ್ಞಾನದಿಂದ ಶ್ರೀಮಂತಗೊಳಿಸುವ ಮೂಲಕ ದೇಶದ ಅಡಿಪಾಯವನ್ನು ನಿರ್ಮಿಸುವಲ್ಲಿ ಶಿಕ್ಷಕರು ಅತ್ಯಂತ ನಿರ್ಣಾಯಕ ಪಾತ್ರವನ್ನು ವಹಿಸುತ್ತಾರೆ. ಒಬ್ಬ ಆದರ್ಶ ಶಿಕ್ಷಕ ಯಾವಾಗಲೂ ಭಾವೋದ್ರಿಕ್ತನಾಗಿರುತ್ತಾನೆ ಮತ್ತು ತನಗೆ ನಿಗದಿಪಡಿಸಿದ ವಿಷಯದ ಬಗ್ಗೆ ನವೀಕರಿಸುತ್ತಾನೆ, ಇದು ಮಕ್ಕಳನ್ನು ಪ್ರೇರೇಪಿಸಲು ಸಹಾಯ ಮಾಡುತ್ತದೆ. ಎರಡೂ ಕಡೆಯವರು ಬೆಳೆಯಲು ಮತ್ತು ಕಲಿಯಲು ಮುಂದುವರಿಯುವುದನ್ನು ಖಚಿತಪಡಿಸಿಕೊಳ್ಳಲು ವಿದ್ಯಾರ್ಥಿಗಳು ಶಿಕ್ಷಕರೊಂದಿಗೆ ಸಹಕರಿಸಬೇಕು.

ಶಿಕ್ಷಕರು ಮಕ್ಕಳ ದಾರಿ ದೀಪವಾಗಿರುತ್ತಾರೆ

ಶಿಕ್ಷಕರು ಮಕ್ಕಳ ಭವಿಷ್ಯಕ್ಕೆ ದಾರಿ ದೀಪವಾಗಿರುತ್ತಾರೆ. ಶಿಕ್ಷಕನು ಮಕ್ಕಳ ಪಾಲಿನ ರಕ್ಷಕ. ಹಾಗಾಗಿ ತನ್ನ ಜ್ಞಾನವನ್ನು ತಾಳ್ಮೆಯಿಂದ, ಪ್ರೀತಿಯಿಂದ ತಮ್ಮ ಜ್ಞಾನವನ್ನು ಮಕ್ಕಳಿಗೆ ನೀಡುವ ಪ್ರಮುಖ ವ್ಯಕ್ತಿ ಎಂದರೆ ಅದು ಶಿಕ್ಷಕನಾಗಿರುತ್ತಾನೆ. ಶಿಕ್ಷಕರ ವೃತ್ತಿಯನ್ನು ಈ ಜಗತ್ತಿನಲ್ಲಿ ಅತ್ಯುತ್ತಮ ಮತ್ತು ಆದರ್ಶ ವೃತ್ತಿ ಎಂದು ಪರಿಗಣಿಸಲಾಗಿದೆ ಏಕೆಂದರೆ ಶಿಕ್ಷಕರು ನಿಸ್ವಾರ್ಥವಾಗಿ ಒಬ್ಬರ ಜೀವನವನ್ನು ರೂಪಿಸುವಲ್ಲಿ ತಮ್ಮ ಸೇವೆಯನ್ನು ನೀಡುತ್ತಾರೆ. ಶಿಕ್ಷಕರಿಗೆ ಅವರದೇ ಆದ ಸ್ಥಾನಮಾನಗಳಿವೆ ಶಿಕ್ಷಕರನ ಉತ್ಸಾಹ ಮತ್ತು ಶಕ್ತಿಯನ್ನು ಅವಲಂಬಿಸಿ ವಿದ್ಯಾರ್ಥಿಗಳು ಹೆಚ್ಚು ಅಂತರಿಕವಾಗಿ ಪ್ರಚೋದಿತರಾಗುತ್ತಾರೆ. ಶಿಕ್ಷಕರ ವೃತ್ತಿ ಜೀವನದ ದೀರ್ಘಾವಧಿಯ ಶಿಕ್ಷಣ ಮತ್ತು ವೃತ್ತಿಪರ ಅಭಿವೃದ್ದಿಗೆ ಮಾರ್ಗದರ್ಶನ ನೀಡುವ ಸಲುವಾಗಿ, ಸಾಧನೆಯೊಂದಿಗೆ ಶೈಕ್ಷಣಿಕ ಯಶಸ್ಸನ್ನು ಬೆಸೆಯುವಲ್ಲಿ ಯೋಗ್ಯವಾದ ಶಿಕ್ಷಕ ಮತ್ತು ವಿದ್ಯಾರ್ಥಿ ಸಂವಾದಗಳು ಬಹುಮುಖ್ಯವಾಗಿವೆ. ಕೆಲವು ಪುರಾವೆ ಅಧಾರಿತ ಅಂತರರಾಷ್ಟ್ರಿಯ ಚರ್ಚೆಗಳು ಅಂತಹ ಸಾಮಾನ್ಯ ತಿಳುವಳಿಕೆಯನ್ನು ದೃಢಪಡಿಸಲು ಪ್ರಯತ್ನಿಸಿವೆ. ಪ್ರತಿಯೊಬ್ಬರಿಗೂ ಮಾರ್ಗದರ್ಶಿಗಳಾಗಿದ್ದಾರೆ.

ಮಕ್ಕಳಲ್ಲಿ ಜ್ಞಾನ ಹೆಚ್ಚಿಸುವುದಕ್ಕೆ ಮೌಲ್ಯಮಾಪನ ಮಾಡುವುದು ಸೂಕ್ತ. ಶಿಕ್ಷಕರು ವಿದ್ಯಾರ್ಥಿಗಳಿಗೆ ಉತ್ಸಾಹವನ್ನು ಹೆಚ್ಚಿನ ಮಟ್ಟದಲ್ಲಿ ತಯಾರಿ ಮಾಡಬೇಕು. ವಿದ್ಯಾರ್ಥಿ-ಶಿಕ್ಷಕರ ಸಂಬಂಧಗಳೊಂದಿಗೆ ಶಾಲೆಯಲ್ಲಿ ವಿದ್ಯಾರ್ಥಿ ಪ್ರೇರಣೆ ಮತ್ತು ವರ್ತನೆಗಳು ನಿಕಟ ಸಂಬಂಧ ಹೊಂದಿದೆಯೆಂದು ಸಂಶೋಧನೆ ತೋರಿಸುತ್ತದೆ. ವಿದ್ಯಾರ್ಥಿಯ ಸಾಧನೆಯನ್ನು ಪೋಷಿಸುವ ಪರಿಣಾಮಕಾರಿ ಕಲಿಕೆಯ ಪರಿಸರವನ್ನು ಸೃಷ್ಟಿಸುವ ಅವರ ಸಾಮರ್ಥವು ಅವರ ವಿದ್ಯಾರ್ಥಿಗಳೊಂದಿಗೆ ಅವರು ರಚಿಸುವ ಸಂಬಂಧದ ಮೇಲೆ ಅವಲಂಬಿತವಾಗಿರುತ್ತದೆ. ಇದು ವಿಷಯ ವಸ್ತುಗಳ ಕಲಿಕೆ ಫಲಿತಾಂಶ ಕಲಿಕೆ ಫಲಿತಾಂಶ ಅಥವಾ ಸ್ಮರಣಶಕ್ತಿಯನ್ನು ನಿಶ್ಚಿತವಾಗಿ ಸುಧಾರಿಸುವುದು ಇದು ಶಿಕ್ಷಕನ ಸಾಮರ್ಥ್ಯವಾಗುವುದು. ಶಿಕ್ಷಕರು ಪ್ರತಿಯೊಬ್ಬರ ಬಾರಿ ದೀಪವಾಗಿ ತಮ್ಮ ಜ್ಞಾನವನ್ನು ಹಂಚುತ್ತಾರೆ.

ಶಿಕ್ಷಕರ ಬಗ್ಗೆ ವಿಧ್ಯಾರ್ಥಿಗಳಿಗೆ ಗೌರವದ ಮನೋಭಾವನೆಯು ಇರಬೇಕು. ಪ್ರತಿಯೊಬ್ಬರ ಜೀವನದಲ್ಲೂ ಗುರುವಿನ ಪಾತ್ರ ಅತೀ ಮುಖ್ಯವಾದುದು. ಶಿಕ್ಷಕರಲ್ಲಿ ವಿದ್ಯಾರ್ಥಿಗಳನ್ನು ಉನ್ನತ ಮಟ್ಟಕ್ಕೆ ತೆಗೆದುಕೊಂಡು ಹೊಗುವ ಸಾಮಾರ್ಥ್ಯವನ್ನು ಹೊಂದಿದ್ದಾರೆ. ಮನುಷ್ಯ ಎಷ್ಟೇ ದೊಡ್ಡವನಾಗಿದ್ದರೂ, ಕಲಿಸಿದ ಗುರುಗಳನ್ನು ಯಾವತ್ತಿಗೂ ಮರೆಯಬಾರದು ಮತ್ತು ಅವರಿಗೆ ಅಗೌರವವನ್ನು ತೋರರಬಾರದು.

ಶಿಕ್ಷಕರ ದಿನವನ್ನು ಯಾವಾಗ ಆಚರಿಸಲಾಗುತ್ತದೆ ?

ಸೆಪ್ಟೆಂಬರ್‌ ೫ ರಂದು ಆಚರಿಸಲಾಗುತ್ತದೆ.

ಯಾರ ಜನ್ಮ ದಿನದ ಅಂಗವಾಗಿ ಶಿಕ್ಷಕರ ದಿನವನ್ನುಆಚರಿಸುತ್ತಾರೆ ?

ರಾಧಕೃಷ್ಣನ್ ಅವರ ಜನ್ಮ ದಿನದ ಅಂಗವಾಗಿ ಶಿಕ್ಷಕರ ದಿನವನ್ನುಆಚರಿಸುತ್ತಾರೆ.

ಇತರೆ ವಿಷಯಗಳು :

ಮಹಿಳಾ ದೌರ್ಜನ್ಯ ಮತ್ತು ಕಾನೂನು ಬಗ್ಗೆ ಪ್ರಬಂಧ

ರಾಷ್ಟ್ರೀಯ ಯುವ ದಿನದ ಬಗ್ಗೆ ಮಾಹಿತಿ

' src=

kannadastudy

Leave a reply cancel reply.

Your email address will not be published. Required fields are marked *

Save my name, email, and website in this browser for the next time I comment.

  • Photogallery
  • ರೈಲ್ವೆ ಯಿಂದ 1376 ಹುದ್ದೆ ನೇಮಕಾತಿಗೆ ಅಧಿಸೂಚನೆ
  • NIT ಕರ್ನಾಟಕ 100 ಬೋಧಕ ಹುದ್ದೆ ನೇಮಕ
  • 10ನೇ ಕ್ಲಾಸ್ ಪಾಸಾದವರಿಗೆ 5000 ಹುದ್ದೆ
  • ರೈಲ್ವೆ ಇಂದ 7951 ಹುದ್ದೆಗೆ ಅರ್ಜಿ ಆಹ್ವಾನ
  • kannada News
  • general knowledge
  • Teachers Day 2022 Significance And History In Kannada

Teachers Day 2022: ಇಂದು ಶಿಕ್ಷಕರ ದಿನಾಚರಣ.. ಈ ದಿನದ ಇತಿಹಾಸ, ಮಹತ್ವದ ಬಗ್ಗೆ ಇಲ್ಲಿದೆ ಸಂಪೂರ್ಣ ಮಾಹಿತಿ

Teachers day: ಪ್ರತಿ ವ್ಯಕ್ತಿಯೂ ತಮ್ಮ ಜೀವನದಲ್ಲಿ ತಂದೆ ತಾಯಿಯ ನಂತರದ ಸ್ಥಾನವನ್ನು ಒಬ್ಬ ಗುರುವಿಗೆ ನೀಡುತ್ತಾರೆ. ಉತ್ತಮ ಶಿಕ್ಷಣ ನೀಡುವುದರ ಜೊತೆಗೆ, ಶಿಕ್ಷಣದ ಮೂಲಾರ್ಥವವನ್ನು ತಿಳಿಸಿ ಪ್ರತಿ ವ್ಯಕ್ತಿಯ ಬದಕನ್ನು ಬೆಳಗುವವರು ಶಿಕ್ಷಕರಾಗಿರುವುದರಿಂದ, ಇಡೀ ಪ್ರಪಂಚವೇ ಅವರನ್ನು ಅಗ್ರಸ್ಥಾನದಲ್ಲಿಟ್ಟು ಪೂಜಿಸುತ್ತದೆ..

teachers day 2022 significance and history in kannada

​ಶಿಕ್ಷಕರ ದಿನಾಚರಣೆಯ ಇತಿಹಾಸ

​ಶಿಕ್ಷಕರ ದಿನಾಚರಣೆಯ ಇತಿಹಾಸ

ರಾಧಕೃಷ್ಣನ ಅತ್ಯುತ್ತಮ ಶಿಕ್ಷಕ, ತತ್ವಜ್ಞಾನಿ ಮತ್ತು ರಾಷ್ಟ್ರಪತಿ, ಉಪರಾಷ್ಟ್ರಪತಿ ಆಗಿದ್ದರು. ಅವರು 1952 ರಿಂದ 1962 ರವರೆಗೆ ಭಾರತದ ಮೊದಲ ಉಪರಾಷ್ಟ್ರಪತಿಗಳಾಗಿ ಸೇವೆ ಸಲ್ಲಿಸಿದರು. ಮತ್ತು 1962 ರಲ್ಲಿ ಭಾರತದ ಎರಡನೇಯ ರಾಷ್ಟ್ರಪತಿ ಹುದ್ದೆಯನ್ನು ಅಲಂಕರಿಸಿದರು. ಮೊದಲ ಶಿಕ್ಷಕರ ದಿನಾಚರಣೆಯನ್ನು ಸೆಪ್ಟೆಂಬರ್ 5 , 1962 ರಮದು ಆಚರಿಸಲಾಯಿತು. ಅಂದಿನಿಂದ ಇಂದಿನವರೆಗೂ ಸೆಪ್ಟೆಂಬರ್ 5 ರಂದು ಶಿಕ್ಷಕರ ದಿನವನ್ನು ಆಚರಣೆ ಮಾಡಲಾಗುತ್ತಿದ್ದು, ಈ ದಿನವನ್ನು ಶಿಕ್ಷಕರಿಗಾಗಿ ಮೀಸಲಿಡಲಾಗಿದೆ.

​ಬೇರೆ ಬೇರೆ ದೇಶಗಳಲ್ಲಿ ಬೇರೆ ಬೇರೆ ದಿನಾಂಕದಂದು ಆಚರಣೆ

​ಬೇರೆ ಬೇರೆ ದೇಶಗಳಲ್ಲಿ ಬೇರೆ ಬೇರೆ ದಿನಾಂಕದಂದು ಆಚರಣೆ

ಶಿಕ್ಷಕರ ದಿನಾಚರಣೆಯನ್ನು ವಿವಿಧ ದೇಶಗಳಲ್ಲಿ ಬೇರೆ ಬೇರೆ ದಿನ, ದಿನಾಂಕದಂದು ಆಚರಿಸಲಾಗುತ್ತದೆ. ಭಾರತದಲ್ಲಿ, ಇದನ್ನು ಪ್ರತಿವರ್ಷ ಸೆಪ್ಟೆಂಬರ್ 5 ರಂದು ಪ್ರಸಿದ್ಧ ವಿದ್ವಾಂಸ, ಭಾರತ ರತ್ನ ಪುರಸ್ಕೃತ, ಮೊದಲ ಉಪರಾಷ್ಟ್ರಪತಿ ಮತ್ತು ಸ್ವತಂತ್ರ ಭಾರತದ ಎರಡನೇ ರಾಷ್ಟ್ರಪತಿ ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಅವರ ಜನ್ಮದಿನದ ನೆನಪಿಗಾಗಿ ಆಚರಿಸಲಾಗುತ್ತದೆ.

NEET, KCET ಬರೆದ ವಿದ್ಯಾರ್ಥಿಗಳ ಗಮನಕ್ಕೆ.. ರಾಜ್ಯದ ಟಾಪ್‌ 25 ಮೆಡಿಕಲ್‌ ಕಾಲೇಜುಗಳ ಪಟ್ಟಿ ಇಲ್ಲಿದೆ

​ಶಿಕ್ಷಕರ ದಿನದ ಮಹತ್ವ

​ಶಿಕ್ಷಕರ ದಿನದ ಮಹತ್ವ

ಒಬ್ಬ ವ್ಯಕ್ತಿಯನ್ನು ಸಮಾಜದಲ್ಲಿ ಒಳ್ಳೆಯ ವ್ಯಕ್ತಿಯಾಗಿ ರೂಪಿಸುವಲ್ಲಿ ಶಿಕ್ಷಕರ ಪಾತ್ರ ಮಹತ್ವದಾಗಿದೆ. ಅದಲ್ಲದೇ ಒಂದು ದೇಶವನ್ನು ಶಿಕ್ಷಕರ ಪಾತ್ರ ಬಹಳ ಮಹತ್ವದಾಗಿದೆ. ಗುರುಕುಲ ಶಿಕ್ಷಣ ದಿಂದ ಹಿಡಿದು ಇಂದಿನ ಶಿಕ್ಷಣದವರೆಗು ಶಿಕ್ಷಕರು ಇತರರ ಜೀವನವನ್ನು ರೂಪಿಸಲು ತಮ್ಮನ್ನು ತಾವು ಅರ್ಪಿಸಿಕೊಳ್ಳುತ್ತಿದ್ದಾರೆ. ಅವರು ವ್ಯಕ್ತಿಯ ಆತ್ಮ ವಿಶ್ವಾಸ, ಬದಕನ್ನು ಬಲಪಡಿಸುತ್ತಾರೆ. ಜೀವನದ ಪ್ರತಿಯೊಂದು ತಪ್ಪು, ಒಪ್ಪುಗಳನ್ನು ತಿದ್ದಿ ತೀಡಿ ಮತ್ತು ಜವಬ್ದಾರಿಯ ಬಗ್ಗೆ ಕಲಿಸಿ ಕೊಡುತ್ತಾರೆ. ವಿದ್ಯಾರ್ಥಿಗಳ ಜೀವನ ಎಂದಿಗೂ ಹಸನಾಗಿರಲಿ ಎಂದು ತುಂಬು ಹೃದಯದಿಂದ ಹಾರೈಸಿ, ಅದಕ್ಕ ಪೂರಕವಾದ ಶಿಕ್ಷಣವನ್ನು ನೀಡುತ್ತಾರೆ. ಹಾಗಾಗಿ ಇಷ್ಟೇಲ್ಲಾ ಜೀವನದ ಪಾಠಗಳನ್ನು ಕಲಿಸಿಕೊಡುವ ಶಿಕ್ಷಕರಿಗೆ ಒಂದು ಸಣ್ಣ ಧನ್ಯವಾದಗಳನ್ನು ಅರ್ಪಿಸುವ ಸಲುವಾಗಿ ಈ ದಿನವನ್ನು ಆಚರಣೆ ಮಾಡಲಾಗುತ್ತದೆ.

​ಶಾಲೆಗಳಲ್ಲಿ ವಿವಿಧ ಕಾರ್ಯಕ್ರಮಗಳು

​ಶಾಲೆಗಳಲ್ಲಿ ವಿವಿಧ ಕಾರ್ಯಕ್ರಮಗಳು

ವಿದ್ಯಾರ್ಥಿಯ ಜೀವನದಲ್ಲಿ ಪ್ರತಿಯೊಂದು ಅಂಶಗಳನ್ನು ತಿದ್ದಿ ತೀಡಿ ಅವರ ಜವಬ್ದಾರಿಯ ಬಗ್ಗೆ ಶಿಕ್ಷಕರು ಕಲಿಸುತ್ತಾರೆ. ವಿದ್ಯಾರ್ಥಿಗಳ ಬದಕು ಯಾವಾಗಲು ಹಸನಾಗಿರಲಿ ಎಂದು ಶ್ರಮಿಸುವ ಅವರು, ವಿದ್ಯಾರ್ಥಿಗಳಿಂದ ಯಾವುದೇ ಅಪೇಕ್ಷೆಯನ್ನು ಬಯಸುವುದಿಲ್ಲ. ಅಂತಹ ಶಿಕ್ಷಕರಿಗೆ ಗೌರವ ಸಲ್ಲಿಸುವ ಸಲುವಾಗಿ ಈ ದಿನವನ್ನು ಆಚರಿಸಲು ವಿವಿಧ ಶಿಕ್ಷಣ ಸಂಸ್ಥೆಗಳು, ಶಾಲೆಗಳಲ್ಲಿ ಹಲವು ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತದೆ. ಈ ದಿನ ವಿದ್ಯಾರ್ಥಿಗಳು ತಮ್ಮ ಶಿಕ್ಷಕರಿಗೆ ವಿಶೇಷ ಉಡುಗೊರೆಗಳನ್ನು ಸಹ ನೀಡಿ ಶುಭಾಶಯ ತಿಳಿಸಿ ಖುಷಿ ಪಡುತ್ತಾರೆ.

ವಿದೇಶಕ್ಕೆ ಅಧ್ಯಯನಕ್ಕೆ ತೆರಳುವ ವಿದ್ಯಾರ್ಥಿಗಳು ಹಣಕಾಸು ನಿರ್ವಹಣೆ ಮಾಡುವುದು ಹೇಗೆ? ಇಲ್ಲಿವೆ ಸಿಂಪಲ್ ಟಿಪ್ಸ್‌

​ಸರ್ವಪಲ್ಲಿ ರಾಧಾಕೃಷ್ಣನ್ ಅವರ ಜನ್ಮದಿನ

​ಸರ್ವಪಲ್ಲಿ ರಾಧಾಕೃಷ್ಣನ್ ಅವರ ಜನ್ಮದಿನ

ಪ್ರತಿ ವರ್ಷ ಸೆಪ್ಟೆಂಬರ್ 5 ರಂದು ಶಿಕ್ಷಕರ ದಿನಾಚರಣೆಯನ್ನು ಆಚರಣೆ ಮಾಡಲಾಗುತ್ತದೆ. ಶಿಕ್ಷಕರ ದಿನವನ್ನು ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಅವರ ಜನ್ಮದಿನದಂದು ಆಚರಿಸಲಾಗುತ್ತದೆ. ಇವರು ಸೆಪ್ಟೆಂಬರ್ 5, 1888 ರಂದು ತಮಿಳುನಾಡಿನ ತಿರುತ್ತಣಿ ಎಂಬಲ್ಲಿ ಜನಿಸಿದರು. ಸರ್ವಪಲ್ಲಿ ಎನ್ನುವುದು ರಾಧಾಕೃಷ್ಣನ್ ಮನೆತನದ ಹೆಸರು, ರಾಧಾಕೃಷ್ಣನ್ ಎನ್ನುವುದು ಅವರ ತಂದೆ ತಾಯಿ ಇಟ್ಟ ಮುದ್ದಿನ ಹೆಸರು. ರಾಧಾಕೃಷ್ಣನ್ ಅವರು ಭಾರತದ ಮೊದಲ ಉಪರಾಷ್ಟ್ರಪತಿಯಾಗಿ, ಭಾರತದ ಎರಡನೇ ರಾಷ್ಟ್ರಪತಿಯಾಗಿ ಸೇವೆ ಸಲ್ಲಿಸಿದ್ದಾರೆ.

​ಶಿಕ್ಷಕರ ದಿನದ ಹಿಂದಿದೆ ರೋಚಕ ಕಥೆ

​ಶಿಕ್ಷಕರ ದಿನದ ಹಿಂದಿದೆ ರೋಚಕ ಕಥೆ

ಪ್ರತಿ ವರ್ಷ ಸರ್ವಪಲ್ಲಿ ರಾಧಾಕೃಷ್ಣನ್ ಅವರ ಜನ್ಮದಿನವಾದ ಸೆಪ್ಟೆಂಬರ್ 5 ರಂದು ಶಿಕ್ಷಕರ ದಿನವನ್ನು ಆಚರಿಸಲಾಗುತ್ತದೆ ಎನ್ನುವುದು ಎಲ್ಲರಿಗೂ ತಿಳಿದ ವಿಚಾರವಾಗಿದೆ. ಆದರೆ ಈ ದಿನದಂದೇ ಯಾಕೆ ಶಿಕ್ಷಕರ ದಿನವನ್ನು ಆಚರಣೆ ಮಾಡಲಾಗುತ್ತದೆ ಎನ್ನುವುದು ಕುರಿತು ಒಂದು ಕುತೂಹಲಕಾರಿ ಸಂಗತಿ ಇದೆ. ಒಮ್ಮೆ ವಿದ್ಯಾರ್ಥಿಗಳಿ ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಅವರ ಜನ್ಮದಿನವನ್ನು ಆಚರಿಸಲು ಕೇಳಿಕೊಂಡರು. ಇದಕ್ಕೆ ಉತ್ತರಿಸಿದ ರಾಧಾಕೃಷ್ಣನ್‌ ಅವರು ನನ್ನ ಜನ್ಮದಿನವನ್ನು ಭಿನ್ನವಾಗಿ ಆಚರಿಸಿ ಎಂದರಂತೆ. ನನ್ನ ಜನ್ಮದಿನವನ್ನು ಆಚರಿಸಲು ಬಯಸಿರುವುದು ಒಳ್ಳೆಯದು. ಆದರೆ ಶಿಕ್ಷಣ ಕ್ಷೇತ್ರದಲ್ಲಿ ಶಿಕ್ಷಕರು ನೀಡಿದ ಕೊಡುಗೆ ಮತ್ತು ಸಮರ್ಪಣೆಯನ್ನು ಗೌರವಿಸುವ ಮೂಲಕ ನೀವು ನನ್ನ ಜನ್ಮ ದಿನವನ್ನು ಆಚರಿಸಿದರೆ ನನಗೆ ಅತ್ಯಂತ ಸಂತೋಷವಾಗುತ್ತದೆ ಎಂದಿದ್ದರು. ಸರ್ವಪಲ್ಲಿ ರಾಧಾಕೃಷ್ಣನ್‌ ಅವರ ಈ ಮಾತನ್ನು ಗೌರವಿಸಿ ಪ್ರತಿ ವರ್ಷ ಸೆಪ್ಟೆಂಬರ್ 5 ರಂದು ಶಿಕ್ಷಕರ ದಿನವನ್ನು ಆಚರಣೆ ಮಾಡಲಾಗುತ್ತದೆ.

ಓದಲೇ ಬೇಕಾದ ಸುದ್ದಿ

ಕಾಂತಾರ ರಿಷಬ್ ಶೆಟ್ಟಿಗೆ ಅತ್ಯುತ್ತಮ ನಟ; ಅತ್ಯುತ್ತಮ ನಟಿ ಎನಿಸಿಕೊಂಡ ಕನ್ನಡತಿ ನಿತ್ಯಾ ಮೆನನ್‌

ಮುಂದಿನ ಲೇಖನ

ಪುನೀತ್ ಉಪಗ್ರಹ : ಉಪಗ್ರಹಕ್ಕೆ ಅಪ್ಪು ಹೆಸರಿಟ್ಟಿದ್ದೇಕೆ? ಈ ಸ್ಯಾಟಲೈಟ್ ಉಡಾವಣೆ ಯಾವಾಗ? ಇಲ್ಲಿದೆ ಸಂಪೂರ್ಣ ಮಾಹಿತಿ

  • ಶಿಕ್ಷಣ ಸುದ್ದಿ
  • ಪ್ರವೇಶಾತಿ ಸುದ್ದಿಗಳು
  • ಉದ್ಯೋಗ ಮಾಹಿತಿ
  • ಕಾಲೇಜು ಮಾಹಿತಿ

about teachers day in kannada essay

  • Click on the Menu icon of the browser, it opens up a list of options.
  • Click on the “Options ”, it opens up the settings page,
  • Here click on the “Privacy & Security” options listed on the left hand side of the page.
  • Scroll down the page to the “Permission” section .
  • Here click on the “Settings” tab of the Notification option.
  • A pop up will open with all listed sites, select the option “ALLOW“, for the respective site under the status head to allow the notification.
  • Once the changes is done, click on the “Save Changes” option to save the changes.

Essay On Teachers' Day 2022 : ಶಿಕ್ಷಕರ ದಿನದ ಪ್ರಯುಕ್ತ ಪ್ರಬಂಧ ಬರೆಯಲು ವಿದ್ಯಾರ್ಥಿ ಮತ್ತು ಮಕ್ಕಳಿಗೆ ಮಾಹಿತಿ ಇಲ್ಲಿದೆ

ಪ್ರತಿಯೊಬ್ಬರಿಗೂ ಶಿಕ್ಷಣ ಹೇಗೆ ಅವಶ್ಯವೋ ಹಾಗೆಯೇ ನಮ್ಮ ಜೀವನದಲ್ಲಿ ಶಿಕ್ಷಕರ ಪಾತ್ರವೂ ಅಷ್ಟೇ ಮುಖ್ಯವಾಗಿದೆ. ಪ್ರತಿಯೊಬ್ಬ ಶಿಕ್ಷಕರನ್ನು ಗೌರವಿಸುವ ಹಿನ್ನೆಲೆಯಲ್ಲಿ ಪ್ರತಿ ವರ್ಷ ಶಿಕ್ಷಕರ ದಿನವನ್ನು ಆಚರಣೆ ಮಾಡಲಾಗುತ್ತದೆ. ಈ ದಿನದಂದು ಶಾಲಾ ಕಾಲೇಜುಗಳಲ್ಲಿ ವಿಭಿನ್ನ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತದೆ. ಈ ಕಾರ್ಯಕ್ರಮಗಳ ಪೈಕಿ ಪ್ರಬಂಧ ಕಾರ್ಯಕ್ರಮವೂ ಒಂದು, ಹಾಗಾಗಿ ವಿದ್ಯಾರ್ಥಿಗಳು ಮತ್ತು ಮಕ್ಕಳು ಶಿಕ್ಷಕರ ದಿನದ ಪ್ರಯುಕ್ತ ಪ್ರಬಂಧ ಬರೆಯಲು ಇಲ್ಲಿ ಮಾಹಿತಿಯನ್ನು ನೀಡಲಾಗಿದೆ ಓದಿ ತಿಳಿಯಿರಿ.

ಶಿಕ್ಷಕರ ದಿನದ ಪ್ರಯುಕ್ತ ಪ್ರಬಂಧಕ್ಕೆ ಮಾಹಿತಿ

ಪ್ರಬಂಧ 1 :

ಬೋಧಕರ ದಿನವು ಪ್ರತಿಯೊಬ್ಬರಿಗೂ ವಿಶೇಷವಾಗಿ ಬೋಧಕ ಮತ್ತು ವಿದ್ವಾಂಸರಿಗೆ ನಿಜವಾಗಿಯೂ ದೊಡ್ಡ ದಿನವಾಗಿದೆ. ಇದನ್ನು ವಿದ್ವಾಂಸರು ತಮ್ಮ ಶಿಕ್ಷಣತಜ್ಞರಿಗೆ ಗೌರವ ಸಲ್ಲಿಸಲು ವಾರ್ಷಿಕವಾಗಿ ಸೆಪ್ಟೆಂಬರ್ 5 ರಂದು ಆಚರಿಸುತ್ತಾರೆ. ಭಾರತದಲ್ಲಿ ಸೆಪ್ಟೆಂಬರ್ 5 ಅನ್ನು ಶಿಕ್ಷಕರ ದಿನವೆಂದು ಘೋಷಿಸಲಾಗಿದೆ. ನಮ್ಮ ಮಾಜಿ ರಾಷ್ಟ್ರಪತಿ ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಅವರು 5 ಸೆಪ್ಟೆಂಬರ್ 1888 ರಂದು ಜನಿಸಿದರು, ಆದ್ದರಿಂದ ಅವರ ಶಿಕ್ಷಣ ವೃತ್ತಿಯ ಮೇಲಿನ ಪ್ರೀತಿ ಮತ್ತು ಪ್ರೀತಿಯ ಪರಿಣಾಮವಾಗಿ ಅವರ ಜನ್ಮದಿನದಂದು ಶಿಕ್ಷಕರ ದಿನವನ್ನು ಭಾರತದಾದ್ಯಂತ ವ್ಯಾಪಕವಾಗಿ ಕರೆಯಲಾಗುತ್ತದೆ. ಅವರು ತರಬೇತಿಯಲ್ಲಿ ಉತ್ತಮ ಧರ್ಮವನ್ನು ಹೊಂದಿದ್ದರು ಮತ್ತು ಹೆಚ್ಚುವರಿಯಾಗಿ ವಿದ್ವಾಂಸ, ರಾಜತಾಂತ್ರಿಕ, ಬೋಧಕ ಮತ್ತು ಭಾರತದ ರಾಷ್ಟ್ರಪತಿಯಾಗಿ ಪ್ರಸಿದ್ಧರಾಗಿದ್ದರು.

ಈ ದಿನದಂದು ಕಾಲೇಜುಗಳು, ಅಧ್ಯಾಪಕರು, ವಿಶ್ವವಿದ್ಯಾನಿಲಯಗಳು ಮತ್ತು ಶೈಕ್ಷಣಿಕ ಸಂಸ್ಥೆಗಳಲ್ಲಿ ಶಿಕ್ಷಣ ತಜ್ಞರು ಮತ್ತು ಕಾಲೇಜು ವಿದ್ಯಾರ್ಥಿಗಳು ಇದನ್ನು ಸಂತೋಷ ಮತ್ತು ಉತ್ಸಾಹದಿಂದ ಆಚರಿಸುತ್ತಾರೆ. ಶಿಕ್ಷಣ ತಜ್ಞರು ತಮ್ಮ ಕಾಲೇಜು ವಿದ್ಯಾರ್ಥಿಗಳಿಂದ ಹಲವಾರು ಅಭಿನಂದನೆಗಳನ್ನು ಪಡೆಯುತ್ತಾರೆ. ಪ್ರಸ್ತುತ ದಿನದಂದು ವಿದ್ವಾಂಸರು ತುಂಬಾ ಸಂತೋಷಪಡುತ್ತಾರೆ ಮತ್ತು ತಮ್ಮದೇ ಆದ ವಿಧಾನದಲ್ಲಿ ತಮ್ಮ ನೆಚ್ಚಿನ ಬೋಧಕರನ್ನು ಅಭಿನಂದಿಸುತ್ತಾರೆ. ಕೆಲವು ಕಾಲೇಜು ವಿದ್ಯಾರ್ಥಿಗಳು ಪೆನ್ನುಗಳು, ಡೋರಿಗಳು ಇತ್ಯಾದಿಗಳನ್ನು ನೀಡುವ ಮೂಲಕ ಅಭಿನಂದಿಸುತ್ತಾರೆ. Fb, Twitter ಅಥವಾ ವೀಡಿಯೊಗೆ ಸಮಾನವಾದ ಕೆಲವು ಸಾಮಾಜಿಕ ನೆಟ್‌ವರ್ಕಿಂಗ್ ವೆಬ್‌ಸೈಟ್‌ಗಳು ಆಡಿಯೊ ಸಂದೇಶ, ಇಮೇಲ್, ಲಿಖಿತ ಸಂದೇಶ ಅಥವಾ ಆನ್‌ಲೈನ್ ಸಂವಾದದ ಮೂಲಕ ತಮ್ಮ ಬೋಧಕರನ್ನು ಅಭಿನಂದಿಸುತ್ತಾರೆ.

ನಮ್ಮ ಜೀವನದಲ್ಲಿ ನಮ್ಮ ಶಿಕ್ಷಣತಜ್ಞರ ಮಹತ್ವ ಮತ್ತು ಅಗತ್ಯವನ್ನು ನಾವು ಯಾವಾಗಲೂ ಅರ್ಥಮಾಡಿಕೊಳ್ಳಬೇಕು ಮತ್ತು ಅವರ ಕರ್ತವ್ಯವನ್ನು ಗೌರವಿಸಲು ನಾವು ‍ಶಿಕ್ಷಕರ ದಿನವನ್ನು ವಾರ್ಷಿಕವಾಗಿ ಆಚರಣೆ ಮಾಡಬೇಕು. ಶಿಕ್ಷಣತಜ್ಞರು ನಮ್ಮ ಜೀವನದಲ್ಲಿ ತಂದೆ ಮತ್ತು ತಾಯಿಗಿಂತ ಹೆಚ್ಚಿನ ಪ್ರಾಮುಖ್ಯತೆಯನ್ನು ಹೊಂದಿದ್ದಾರೆ, ಇದರ ಪರಿಣಾಮವಾಗಿ ಅವರು ನಮ್ಮನ್ನು ಯಶಸ್ಸಿನ ದಿಕ್ಕಿನಲ್ಲಿ ಮುನ್ನಡೆಸುತ್ತಾರೆ. ಅವರ ವಿದ್ಯಾರ್ಥಿಗಳ ಪ್ರಪಂಚದ ಎಲ್ಲೆಡೆ ಖ್ಯಾತಿಯನ್ನು ಗಳಿಸಿದಾಗ ಮಾತ್ರ ಶಿಕ್ಷಣ ತಜ್ಞರು ತಮ್ಮ ಜೀವನದಲ್ಲಿ ಸಂತೋಷ ಮತ್ತು ಲಾಭದಾಯಕವಾಗುತ್ತಾರೆ. ನಮ್ಮ ಜೀವನದಲ್ಲಿ ಬೋಧಕರು ಕಲಿಸಿದ ಎಲ್ಲಾ ಬೋಧನೆಗಳನ್ನು ನಾವು ಯಾವಾಗಲೂ ಅನುಸರಿಸಬೇಕು.

ರಾಷ್ಟ್ರದೊಳಗೆ ವಾಸಿಸುವ ನಿವಾಸಿಗಳಿಗೆ ಮುಂದಿನ ದಾರಿಯನ್ನು ನಿರ್ಮಿಸುವ ಮೂಲಕ ಶಿಕ್ಷಣ ತಜ್ಞರು ರಾಷ್ಟ್ರ ನಿರ್ಮಾಣ ಕಾರ್ಯವನ್ನು ಮಾಡುತ್ತಾರೆ. ಆದಾಗ್ಯೂ ಸಮಾಜದೊಳಗಿನ ಯಾವುದೇ ವ್ಯಕ್ತಿ ಶಿಕ್ಷಣ ತಜ್ಞರು ಮತ್ತು ಅವರ ಕೊಡುಗೆಯ ಬಗ್ಗೆ ಯೋಚಿಸಲಿಲ್ಲ. ಆದಾಗ್ಯೂ ಈ ಎಲ್ಲಾ ಕ್ರೆಡಿಟ್ ಸ್ಕೋರ್ ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಅವರಿಗೆ ಹೋಗುತ್ತದೆ, ಅವರು ತಮ್ಮ ಜನ್ಮದಿನವನ್ನು ಶಿಕ್ಷಕರ ದಿನವಾಗಿ ಉತ್ತಮ ಸಮಯವನ್ನು ಹೊಂದಲು ಸಲಹೆ ನೀಡಿದರು. 1962 ರಿಂದ ಸೆಪ್ಟೆಂಬರ್ 5 ಅನ್ನು ವಾರ್ಷಿಕವಾಗಿ ಶೈಕ್ಷಣಿಕ ದಿನ ಎಂದು ವ್ಯಾಪಕವಾಗಿ ಕರೆಯಲಾಗುತ್ತದೆ. ಶಿಕ್ಷಣತಜ್ಞರು ನಮಗೆ ಕೇವಲ ಶಿಕ್ಷಣ ನೀಡುವುದಿಲ್ಲ ಆದರೆ ಹೆಚ್ಚುವರಿಯಾಗಿ ಅವರು ನಮ್ಮ ವ್ಯಕ್ತಿತ್ವ, ಆತ್ಮವಿಶ್ವಾಸ ಮತ್ತು ಸಾಮರ್ಥ್ಯದ ಪದವಿಯನ್ನು ಹೆಚ್ಚಿಸುತ್ತಾರೆ. ಯಾವುದೇ ತೊಂದರೆಗಳನ್ನು ಎದುರಿಸಲು ಅವರು ನಮಗೆ ಅವಕಾಶ ಮಾಡಿಕೊಡುತ್ತಾರೆ.

ಸರಳ ಸಾಲುಗಳಲ್ಲಿ ಪ್ರಬಂಧ 2:

1) ನಮ್ಮ ಶಿಕ್ಷಕರಿಗೆ ನಮ್ಮ ಕೃತಜ್ಞತೆ ಮತ್ತು ಗೌರವವನ್ನು ತೋರಿಸಲು ನಾವು ಶಿಕ್ಷಕರ ದಿನವನ್ನು ಆಚರಿಸುತ್ತೇವೆ.

2) ಇದು ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಅವರ ಜನ್ಮದಿನವಾದ ಸೆಪ್ಟೆಂಬರ್ 5 ರಂದು ವಾರ್ಷಿಕ ಆಚರಣೆಯಾಗಿದೆ.

3) ಜೂನ್-ಜುಲೈನಲ್ಲಿ ಹಿಂದೂ ಕ್ಯಾಲೆಂಡರ್ನಲ್ಲಿ ಗುರು ಪೂರ್ಣಿಮಾ ಶಿಕ್ಷಕರ ದಿನಾಚರಣೆಯ ಒಂದು ರೂಪವಾಗಿದೆ.

4) ಪ್ರಪಂಚದ ಪ್ರತಿಯೊಂದು ದೇಶವು ತನ್ನದೇ ಆದ ಶಿಕ್ಷಕರ ದಿನವನ್ನು ಹೊಂದಿದೆ.

5) ವಿಶ್ವ ಶಿಕ್ಷಕರ ದಿನವು ಅಕ್ಟೋಬರ್ 5 ರಂದು ಬರುತ್ತದೆ.

6) ಭಾರತವು 1962 ರಿಂದ ಸೆಪ್ಟೆಂಬರ್ 5 ರಂದು ಶಿಕ್ಷಕರ ದಿನವನ್ನು ಆಚರಿಸುತ್ತಿದೆ.

7) ಈ ಸಂದರ್ಭದಲ್ಲಿ, ಜನರು ಡಾ. ರಾಧಾಕೃಷ್ಣನ್ ಮತ್ತು ಇತರ ಗಮನಾರ್ಹ ವಿದ್ವಾಂಸರ ಪ್ರತಿಮೆಗಳನ್ನು ಅಲಂಕರಿಸುತ್ತಾರೆ.

8) ಶಿಕ್ಷಕರು ತಮ್ಮ ದಿನನಿತ್ಯದ ಕೆಲಸದಿಂದ ಒಂದು ದಿನ ರಜೆ ಪಡೆಯುತ್ತಾರೆ.

9) ಭಾರತದಾದ್ಯಂತದ ವಿದ್ಯಾರ್ಥಿಗಳು ಬಹಳ ಉತ್ಸಾಹದಿಂದ ದಿನವನ್ನು ಆಚರಿಸುತ್ತಾರೆ.

10) ವಿದ್ಯಾರ್ಥಿಗಳು ತಮ್ಮ ಶಿಕ್ಷಕರನ್ನು ಗೌರವಿಸುತ್ತಾರೆ ಮತ್ತು ಗೌರವದ ಸಂಕೇತವಾಗಿ ಅವರಿಗೆ ಉಡುಗೊರೆಗಳನ್ನು ನೀಡುತ್ತಾರೆ.

ಪ್ರಬಂಧ 3 :

ಶಾಲೆಯ ಮೊದಲ ದಿನದಿಂದಲೇ ಶಿಕ್ಷಕರು ಮಗುವಿನ ಅಧ್ಯಯನದಲ್ಲಿ ಮಾರ್ಗದರ್ಶಕರಾಗುತ್ತಾರೆ. ಪ್ರಾಥಮಿಕ ತರಗತಿಯ ವಿದ್ಯಾರ್ಥಿಗಳು ಶಿಕ್ಷಕರ ದಿನದ ಬಗ್ಗೆ ಉತ್ಸುಕರಾಗಿದ್ದಾರೆ ಆದರೆ ಅವರ ಭಾವನೆಗಳನ್ನು ಮತ್ತು ಆಲೋಚನೆಗಳನ್ನು ಪದಗಳಲ್ಲಿ ಹೇಗೆ ಹೇಳಬೇಕೆಂದು ಕಲಿಯುತ್ತಿದ್ದಾರೆ. ಈ ಲೇಖನ ಅವರ ಆಲೋಚನೆಗಳನ್ನು ಸಂಗ್ರಹಿಸಲು ಮತ್ತು ಅವುಗಳನ್ನು ಸರಳ ವಾಕ್ಯಗಳಲ್ಲಿ ಬರೆಯಲು ಸಹಾಯ ಮಾಡುತ್ತದೆ. ಶಿಕ್ಷಕರ ದಿನದಂದು ವಿದ್ಯಾರ್ಥಿಗಳು ಮತ್ತು ಮಕ್ಕಳು 10 ಸಾಲುಗಳಲ್ಲಿ ಪ್ರಬಂಧ ಬರೆಯಲು ಮಾಹಿತಿ ಇಲ್ಲಿದೆ.

* ನಾವು ಸೆಪ್ಟೆಂಬರ್ 5 ರಂದು ಭಾರತದಲ್ಲಿ ಶಿಕ್ಷಕರ ದಿನವನ್ನು ಆಚರಿಸುತ್ತೇವೆ. * ನಮ್ಮ ಶಿಕ್ಷಕರಿಗೆ ನಮ್ಮ ಗೌರವ ಮತ್ತು ಕೃತಜ್ಞತೆಯನ್ನು ತೋರಿಸಲು ಇದನ್ನು ಆಚರಿಸಲಾಗುತ್ತದೆ. * ಇದನ್ನು ಡಾ ಸರ್ವಪಲ್ಲಿ ರಾಧಾಕೃಷ್ಣನ್ ಅವರ ಜನ್ಮದಿನದ ನೆನಪಿಗಾಗಿ ಆಚರಿಸಲಾಗುತ್ತದೆ. * ಅಂತರರಾಷ್ಟ್ರೀಯ ಶಿಕ್ಷಕರ ದಿನವನ್ನು ವಿಶ್ವದ ಇತರ ಭಾಗಗಳಲ್ಲಿ ಅಕ್ಟೋಬರ್ 5 ರಂದು ಆಚರಿಸಲಾಗುತ್ತದೆ. * ಈ ದಿನ ಶಿಕ್ಷಕರು ಕರ್ತವ್ಯದಿಂದ ಹೊರಗುಳಿಯುತ್ತಾರೆ. ಹಿರಿಯ ವಿದ್ಯಾರ್ಥಿಗಳು ಶಿಕ್ಷಕರಂತೆ ವೇಷ ಧರಿಸಿ ಶಾಲೆಗೆ ಬಂದು ತರಗತಿಗಳನ್ನು ತೆಗೆದುಕೊಳ್ಳುತ್ತಾರೆ. * ಶಿಕ್ಷಕರು ವಿಶ್ರಮಿಸುತ್ತಾರೆ ಮತ್ತು ವಿದ್ಯಾರ್ಥಿಗಳು ಅವರಿಗೆ ಯೋಜಿಸಿರುವ ಚಟುವಟಿಕೆಗಳನ್ನು ಆನಂದಿಸುತ್ತಾರೆ. * ನನ್ನ ಶಾಲೆಯಲ್ಲಿ ನಮ್ಮ ಶಿಕ್ಷಕರ ಪ್ರಾಮುಖ್ಯತೆಯನ್ನು ಪ್ರದರ್ಶಿಸಲು ನಾವು ಸ್ಕಿಟ್‌ಗಳು ಮತ್ತು ಇತರ ಸಾಂಸ್ಕೃತಿಕ ಚಟುವಟಿಕೆಗಳನ್ನು ಸಹ ನಡೆಸುತ್ತೇವೆ. * ವಿದ್ಯಾರ್ಥಿಗಳಿಂದ ವಿಶೇಷ ಅಸೆಂಬ್ಲಿಯನ್ನೂ ನಡೆಸುತ್ತೇವೆ. * ನಾವು ನಮ್ಮ ಶಿಕ್ಷಕರಿಗೆ ಸಣ್ಣ ಉಡುಗೊರೆಗಳನ್ನು ನೀಡುತ್ತೇವೆ. ಪ್ರೀತಿ ಮತ್ತು ಕೃತಜ್ಞತೆಯನ್ನು ತೋರಿಸಲು ನನ್ನ ಎಲ್ಲಾ ಮೆಚ್ಚಿನ ಶಿಕ್ಷಕರಿಗೆ ಶುಭಾಶಯ ಪತ್ರಗಳನ್ನು ಮಾಡಲು ನಾನು ಇಷ್ಟಪಡುತ್ತೇನೆ. * ಭಾರತದಾದ್ಯಂತ ಶಾಲೆಗಳು ಶಿಕ್ಷಕರ ದಿನವನ್ನು ಬಹಳಷ್ಟು ಉತ್ಸಾಹ ಮತ್ತು ಉತ್ಸಾಹದಿಂದ ಆಚರಿಸುತ್ತವೆ.

ಪ್ರಬಂಧ 4 :

ಶಿಕ್ಷಕರ ದಿನವು ಪ್ರತಿಯೊಬ್ಬರಿಗೂ ವಿಶೇಷವಾಗಿ ಶಿಕ್ಷಕರು ಮತ್ತು ವಿದ್ಯಾರ್ಥಿಗಳಿಗೆ ಬಹಳ ವಿಶೇಷವಾದ ಸಂದರ್ಭವಾಗಿದೆ. ವಿದ್ಯಾರ್ಥಿಗಳು ತಮ್ಮ ಶಿಕ್ಷಕರನ್ನು ಗೌರವಿಸಲು ಪ್ರತಿ ವರ್ಷ ಸೆಪ್ಟೆಂಬರ್ 5 ರಂದು ಶಿಕ್ಷಕರ ದಿನವನ್ನು ಆಚರಿಸುತ್ತಾರೆ. ಭಾರತದಲ್ಲಿ ಸೆಪ್ಟೆಂಬರ್ 5 ಅನ್ನು ಶಿಕ್ಷಕರ ದಿನವೆಂದು ಘೋಷಿಸಲಾಗಿದೆ. ನಮ್ಮ ಹಿಂದಿನ ರಾಷ್ಟ್ರಪತಿ ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಅವರು ಸೆಪ್ಟೆಂಬರ್ 5 ರಂದು ಜನಿಸಿದರು, ಆದ್ದರಿಂದ ಅವರ ಜನ್ಮದಿನದಂದು ಭಾರತದಲ್ಲಿ ಶಿಕ್ಷಕರ ದಿನವನ್ನು ಆಚರಿಸಲಾಗುತ್ತದೆ ಏಕೆಂದರೆ ಅವರ ಶಿಕ್ಷಕ ವೃತ್ತಿಯ ಮೇಲಿನ ಅಪಾರವಾದ ಪ್ರೀತಿಯಿಂದಾಗಿ. ಅವರು ಶಿಕ್ಷಣದ ಬಗ್ಗೆ ಅಪಾರ ನಂಬಿಕೆಯುಳ್ಳವರಾಗಿದ್ದರು ಮತ್ತು ಭಾರತದ ವಿದ್ವಾಂಸ, ರಾಜತಾಂತ್ರಿಕ, ಶಿಕ್ಷಕ ಮತ್ತು ರಾಷ್ಟ್ರಪತಿಯಾಗಿ ಹೆಚ್ಚು ಪ್ರಸಿದ್ಧರಾಗಿದ್ದರು.

ಶಿಕ್ಷಕರ ದಿನವು ಶಿಕ್ಷಕರು ಮತ್ತು ವಿದ್ಯಾರ್ಥಿಗಳ ನಡುವಿನ ಸಂಬಂಧವನ್ನು ಆಚರಿಸಲು ಮತ್ತು ಆನಂದಿಸಲು ಉತ್ತಮ ಸಂದರ್ಭವಾಗಿದೆ. ಈ ದಿನವನ್ನು ಶಾಲೆಗಳು, ಕಾಲೇಜುಗಳು, ವಿಶ್ವವಿದ್ಯಾನಿಲಯಗಳು ಮತ್ತು ಇತರ ಶಿಕ್ಷಣ ಸಂಸ್ಥೆಗಳಲ್ಲಿ ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಇಬ್ಬರೂ ಉತ್ಸಾಹ ಮತ್ತು ಸಂತೋಷದಿಂದ ಆಚರಿಸುತ್ತಾರೆ. ಶಿಕ್ಷಕರಿಗೆ ತಮ್ಮ ವಿದ್ಯಾರ್ಥಿಗಳಿಂದ ದೀರ್ಘಾಯುಷ್ಯದ ಬಗ್ಗೆ ಸಾಕಷ್ಟು ಶುಭಾಶಯಗಳನ್ನು ನೀಡಲಾಗುತ್ತದೆ. ಆಧುನಿಕ ಕಾಲದಲ್ಲಿ ಶಿಕ್ಷಕರ ದಿನದ ಆಚರಣೆಯ ತಂತ್ರವು ಪ್ರಮಾಣಿತವಾಗಿದೆ.

ವಿದ್ಯಾರ್ಥಿಗಳು ಈ ದಿನ ತುಂಬಾ ಸಂತೋಷದಿಂದಿರುತ್ತಾರೆ ಮತ್ತು ತಮ್ಮ ನೆಚ್ಚಿನ ಶಿಕ್ಷಕರನ್ನು ಹಾರೈಸುವ ಮಾರ್ಗವನ್ನು ಯೋಜಿಸುತ್ತಿರುತ್ತಾರೆ. ಕೆಲವು ವಿದ್ಯಾರ್ಥಿಗಳು ತಮ್ಮ ನೆಚ್ಚಿನ ಶಿಕ್ಷಕರಿಗೆ ಉಡುಗೊರೆಗಳು, ಗ್ರೀಟಿಂಗ್ ಕಾರ್ಡ್‌ಗಳು, ಪೆನ್, ಡೈರಿಗಳು ಇತ್ಯಾದಿಗಳನ್ನು ನೀಡುವ ಮೂಲಕ ಹಾರೈಸುತ್ತಾರೆ. ಕೆಲವು ವಿದ್ಯಾರ್ಥಿಗಳು ತಮ್ಮ ಶಿಕ್ಷಕರಿಗೆ ಆಡಿಯೋ ಸಂದೇಶಗಳು, ಇಮೇಲ್‌ಗಳು, ವಿಡಿಯೋ ಸಂದೇಶಗಳು, ಲಿಖಿತ ಸಂದೇಶಗಳನ್ನು ಆನ್‌ಲೈನ್ ಚಾಟ್, ಫೇಸ್‌ಬುಕ್, ಟ್ವಿಟರ್‌ನಂತಹ ಸಾಮಾಜಿಕ ಮಾಧ್ಯಮಗಳ ಮೂಲಕ ಕಳುಹಿಸುವ ಮೂಲಕ ಹಾರೈಸುತ್ತಾರೆ. ಕೆಲವು ಮಾತ್ರ "ಶಿಕ್ಷಕರ ದಿನದ ಶುಭಾಶಯಗಳು" ಎಂದು ಮೌಖಿಕವಾಗಿ ಹಾರೈಸುತ್ತಾರೆ.

ನಮ್ಮ ಜೀವನದಲ್ಲಿ ನಮ್ಮ ಶಿಕ್ಷಕರ ಅವಶ್ಯಕತೆ ಮತ್ತು ಮೌಲ್ಯವನ್ನು ನಾವು ಅರಿತುಕೊಳ್ಳಬೇಕು ಮತ್ತು ಪ್ರತಿ ವರ್ಷ ಶಿಕ್ಷಕರ ದಿನಾಚರಣೆಯನ್ನು ಆಚರಿಸಿ ಅವರಿಗೆ ಗೌರವ ಸಲ್ಲಿಸಬೇಕು. ಯಶಸ್ಸಿನತ್ತ ನಮ್ಮ ಮನಸ್ಸನ್ನು ರೂಪಿಸುವ ನಮ್ಮ ಪೋಷಕರಿಗಿಂತ ಶಿಕ್ಷಕರು ಹೆಚ್ಚು. ಅವರ ಸಮರ್ಪಿತ ವಿದ್ಯಾರ್ಥಿಗಳು ಮುಂದೆ ಹೋದರೆ ಮತ್ತು ಅವರ ಚಟುವಟಿಕೆಗಳ ಮೂಲಕ ಶಿಕ್ಷಕರ ಹೆಸರನ್ನು ಪ್ರಪಂಚದಾದ್ಯಂತ ಹರಡಿದರೆ ಮಾತ್ರ ಅವರು ಸಂತೋಷವಾಗುತ್ತಾರೆ ಮತ್ತು ಜೀವನದಲ್ಲಿ ತಮ್ಮ ಯಶಸ್ಸನ್ನು ಪಡೆಯುತ್ತಾರೆ. ನಮ್ಮ ಶಿಕ್ಷಕರು ಕಲಿಸಿದ ಎಲ್ಲಾ ಉತ್ತಮ ಪಾಠಗಳನ್ನು ನಾವು ನಮ್ಮ ಜೀವನದಲ್ಲಿ ಅನುಸರಿಸಬೇಕು.

ಪ್ರಬಂಧ 5:

ಶಿಕ್ಷಕರ ದಿನಾಚರಣೆಯು ಮಕ್ಕಳಲ್ಲಿ ಕಲ್ಪನೆ, ಭರವಸೆ ಮತ್ತು ಕಲಿಕೆಯ ಪ್ರೀತಿಯನ್ನು ಹುಟ್ಟುಹಾಕುವ, ಅವರನ್ನು ಉತ್ತಮ ನಾಳೆಗಾಗಿ ಮಾರ್ಗದರ್ಶನ ಮಾಡುವ ಮತ್ತು ಸಿದ್ಧಪಡಿಸುವ ಸಮಾಜದ ಶ್ರೇಷ್ಠ ಸ್ತಂಭಗಳಲ್ಲಿ ಒಬ್ಬರಿಗೆ ಕೃತಜ್ಞತೆಯನ್ನು ತೋರಿಸಲು ಒಂದು ಮಾರ್ಗವಾಗಿದೆ.

ಶಿಕ್ಷಕರ ದಿನಾಚರಣೆಯ ಮೂಲ :

ಡಾ. ಸರ್ವೆಪಲ್ಲಿ ರಾಧಾಕೃಷ್ಣನ್ ಅವರು ಪ್ರಸಿದ್ಧ ಭಾರತೀಯ ವಿದ್ವಾಂಸರು ಮತ್ತು ಶಿಕ್ಷಕರು. 1962 ರಲ್ಲಿ ಅವರು ಭಾರತದ ಎರಡನೇ ರಾಷ್ಟ್ರಪತಿಯಾದರು. ಅವರ ಕೆಲವು ವಿದ್ಯಾರ್ಥಿಗಳು ಸೆಪ್ಟೆಂಬರ್ 5 ರಂದು ಅವರ ಜನ್ಮದಿನವನ್ನು ಆಚರಿಸಲು ತೀವ್ರ ಆಸಕ್ತಿಯನ್ನು ತೋರಿಸಿದರು ಮತ್ತು ಅದೇ ಆಲೋಚನೆಯೊಂದಿಗೆ ಅವರನ್ನು ಸಂಪರ್ಕಿಸಿದರು. ರಾಧಾಕೃಷ್ಣನ್ ಅವರು ತಮ್ಮ ಜನ್ಮದಿನದ ಬದಲು ಶಿಕ್ಷಕರ ದಿನವನ್ನು ಆಚರಿಸಲು ಕೇಳಿಕೊಂಡರು ಮತ್ತು ಅದು ಅವರಿಗೆ ಗೌರವವನ್ನು ನೀಡುತ್ತದೆ. ಅಂದಿನಿಂದ ಸೆಪ್ಟೆಂಬರ್ 5 ಅನ್ನು ದೇಶದಾದ್ಯಂತ ಎಲ್ಲಾ ಶಿಕ್ಷಕರಿಗೆ ಸಮರ್ಪಿಸಲಾಗಿದೆ ಮತ್ತು ಶಿಕ್ಷಕರ ದಿನವಾಗಿ ಆಚರಿಸಲಾಗುತ್ತದೆ. ಮಕ್ಕಳ ಜೀವನವನ್ನು ರೂಪಿಸುವಲ್ಲಿ ಪ್ರಮುಖ ಪಾತ್ರ ವಹಿಸುವ ಮಾರ್ಗದರ್ಶಕರು, ಗುರುಗಳು ಮತ್ತು ಶಿಕ್ಷಕರು ನೀಡಿದ ಕೊಡುಗೆಗಳನ್ನು ಗೌರವಿಸಲು ಮತ್ತು ಗುರುತಿಸಲು ಈ ದಿನವನ್ನು ಆಚರಿಸಲಾಗುತ್ತದೆ.

ಶಿಕ್ಷಕರ ದಿನದ ಮಹತ್ವ :

ಶಿಕ್ಷಣತಜ್ಞರು ಮತ್ತು ಶಿಕ್ಷಕರು ಜ್ಞಾನದ ನಿಧಿಯಾಗಿದ್ದು, ಅವರು ಮುಂದಿನ ಪೀಳಿಗೆಗೆ ಉತ್ತಮ ಜಗತ್ತನ್ನು ನಿರ್ಮಿಸುತ್ತಾರೆ ಎಂಬ ಅಂಶದಲ್ಲಿ ದಿನದ ಮಹತ್ವ ಅಡಗಿದೆ. ಶಿಕ್ಷಕರು ಬುದ್ಧಿವಂತ ಜನಸಂಖ್ಯೆಯನ್ನು ನಿರ್ಮಿಸಲು ಸಹಾಯ ಮಾಡುತ್ತಾರೆ. ಈ ದಿನವನ್ನು ಶಿಕ್ಷಕರಿಗೆ ಅವರು ಎಷ್ಟು ಮುಖ್ಯವೆಂದು ತೋರಿಸಲು, ಕಲಿಯುವವರು ಅವರ ಬಗ್ಗೆ ಹೊಂದಿರುವ ಪ್ರೀತಿಯನ್ನು ವ್ಯಕ್ತಪಡಿಸಲು ಮತ್ತು ಅವರ ಕೊಡುಗೆಗಾಗಿ ಶಿಕ್ಷಕರನ್ನು ಗುರುತಿಸಲು ಸಮರ್ಪಿಸಲಾಗಿದೆ.

ಶಿಕ್ಷಕರ ದಿನವನ್ನು ಆಚರಿಸುವುದರಿಂದ ಮಕ್ಕಳಿಗೆ ಶಿಕ್ಷಣದ ಪ್ರಾಮುಖ್ಯತೆ ಮತ್ತು ಪರಿಣಾಮಕಾರಿ ಕಲಿಕೆಯನ್ನು ಬೆಳೆಸುವಲ್ಲಿ ಶಿಕ್ಷಕರು ವಹಿಸುವ ನಿರ್ಣಾಯಕ ಪಾತ್ರವನ್ನು ಅರ್ಥಮಾಡಿಕೊಳ್ಳಲು ಸಹಾಯ ಮಾಡುತ್ತದೆ. ಈ ರೀತಿಯಾಗಿ ಕಲಿಯುವವರು ತಮ್ಮ ಜೀವನದಲ್ಲಿ ಸಲಹೆ ಮತ್ತು ಸಾಮಾಜಿಕ ರೂಪಾಂತರದ ಪರಿಣಾಮಕಾರಿ ಸಾಧನಗಳಾಗಿ ಸೇವೆ ಸಲ್ಲಿಸುವ ಮಾರ್ಗದರ್ಶಕರು ಮತ್ತು ಶಿಕ್ಷಕರನ್ನು ಪ್ರಶಂಸಿಸಲು, ಅಂಗೀಕರಿಸಲು ಮತ್ತು ಗೌರವಿಸಲು ಸಾಧ್ಯವಾಗುತ್ತದೆ.

ಈ ದಿನವು ಕಲಿಯುವವರಿಗೆ ಅಥವಾ ವಿದ್ಯಾರ್ಥಿಗಳಿಗೆ ವಿನಮ್ರವಾಗಿರಲು ಮತ್ತು ಯಶಸ್ಸಿನ ಹಾದಿಯನ್ನು ತೋರಿಸಿದ ಶಿಕ್ಷಕರು ಮತ್ತು ಗುರುಗಳ ಕಡೆಗೆ ತಮ್ಮ ಪ್ರೀತಿ ಮತ್ತು ಕೃತಜ್ಞತೆಯನ್ನು ವ್ಯಕ್ತಪಡಿಸಲು ನೆನಪಿಸುತ್ತದೆ. ಕಲಿಯುವವರಲ್ಲಿ ನಮ್ರತೆಯ ಭಾವನೆಯು ಅವರು ನೆಲಸಮವಾಗಿರುವುದನ್ನು ಖಾತ್ರಿಪಡಿಸುತ್ತದೆ ಮತ್ತು ಅವರನ್ನು ಗಮನಿಸುವ, ಮಾರ್ಗದರ್ಶನ ನೀಡುವ, ಅವರನ್ನು ರಕ್ಷಿಸುವ ಮತ್ತು ಉಬ್ಬರವಿಳಿತದ ಸಮಯದಲ್ಲಿ ಅವರು ಯಾರ ಕಡೆಗೆ ತಿರುಗಬಹುದು ಎಂಬುದನ್ನು ಅವರು ಹೊಂದಿದ್ದಾರೆ.

ಭಾರತದಲ್ಲಿ ಶಿಕ್ಷಕರ ದಿನವನ್ನು ಹೇಗೆ ಆಚರಿಸಲಾಗುತ್ತದೆ :

* ಈ ದಿನವನ್ನು ಭಾರತದಲ್ಲಿ ಪ್ರತಿ ವರ್ಷ ಸೆಪ್ಟೆಂಬರ್ 5 ರಂದು ಪ್ರತಿ ಶಾಲೆ ಮತ್ತು ಕಾಲೇಜಿನಲ್ಲಿ ಆಚರಿಸಲಾಗುತ್ತದೆ ಮತ್ತು ಮಹಾನ್ ವಿದ್ವಾಂಸರು, ಶಿಕ್ಷಕರು ಮತ್ತು ದಾರ್ಶನಿಕ ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಅವರಿಗೆ ಗೌರವ ಸಲ್ಲಿಸುವ ಮೂಲಕ ಗುರುತಿಸಲಾಗುತ್ತದೆ. ಈ ದಿನದ ಸಿದ್ಧತೆಗಳು ಕನಿಷ್ಠ ಹದಿನೈದು ದಿನಗಳ ಮುಂಚಿತವಾಗಿ ಪ್ರಾರಂಭವಾಗುತ್ತದೆ. ಸಾಮಾನ್ಯವಾಗಿ ಆಚರಣೆಯು ಶಾಲೆ ಅಥವಾ ಕಾಲೇಜು ಆಂಫಿಥಿಯೇಟರ್ ಅಥವಾ ಸಭಾಂಗಣದಲ್ಲಿ ನಡೆಯುತ್ತದೆ.

* ವಿದ್ಯಾರ್ಥಿಗಳು ಸಣ್ಣ ಪ್ರಾರ್ಥನೆ ಸೇವೆಯನ್ನು ನಡೆಸುತ್ತಾರೆ, ನಂತರ ಶಿಕ್ಷಕರು ಅಥವಾ ಪ್ರಾಂಶುಪಾಲರು ದೀಪವನ್ನು ಬೆಳಗಿಸುತ್ತಾರೆ. ಆಯಾ ತರಗತಿಗಳ ವಿದ್ಯಾರ್ಥಿಗಳಿಂದ ನೃತ್ಯಗಳು ಮತ್ತು ಕಿರುನಾಟಕಗಳು ಸೇರಿದಂತೆ ವಿಶೇಷ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಪ್ರದರ್ಶಿಸಲಾಗುತ್ತದೆ. ಕೆಲವು ಶಾಲೆಗಳು ತಮ್ಮ ಶಿಕ್ಷಕರಿಗೆ ಪ್ರಶಸ್ತಿಗಳನ್ನು ಸಹ ವಿತರಿಸುತ್ತವೆ. ಶಿಕ್ಷಕರನ್ನು ವಿವಿಧ ಆಟಗಳಲ್ಲಿ ಭಾಗವಹಿಸುವಂತೆ ಮಾಡಲಾಗುತ್ತದೆ ಮತ್ತು ಮಕ್ಕಳಿಂದ ಸಂಭ್ರಮದ ಹಾಡುಗಳು ಮತ್ತು ಶ್ಲೋಕಗಳನ್ನು ಹಾಡಲಾಗುತ್ತದೆ.

* ವಿದ್ಯಾರ್ಥಿ ಮಂಡಳಿಯು ಶಿಕ್ಷಕರ ಕೊಡುಗೆಗಳು ಮತ್ತು ಪ್ರಯತ್ನಗಳನ್ನು ಎತ್ತಿ ತೋರಿಸುವ ಭಾಷಣವನ್ನು ನೀಡುತ್ತದೆ ಮತ್ತು ಅವರ ತಾಳ್ಮೆಯ ಕಿವಿಗಳಿಗಾಗಿ ಅವರ ಬೋಧನಾ ಸಿಬ್ಬಂದಿಗೆ ಧನ್ಯವಾದ, ಪ್ಯಾಟ್ ಮತ್ತು ಬೇಷರತ್ತಾದ ಪ್ರೀತಿಯನ್ನು ಪ್ರೋತ್ಸಾಹಿಸುತ್ತದೆ.

* ಕೆಲವು ಶಾಲೆಗಳಲ್ಲಿ 11 ಮತ್ತು 12 ನೇ ತರಗತಿಯ ವಿದ್ಯಾರ್ಥಿಗಳು ತಮ್ಮ ಶಿಕ್ಷಕರಂತೆ ವೇಷಭೂಷಣಗಳನ್ನು ಧರಿಸುತ್ತಾರೆ ಮತ್ತು ತರಗತಿಗಳನ್ನು ನಡೆಸುವ ಮೂಲಕ ಶಿಕ್ಷಕರ ಪಾತ್ರವನ್ನು ವಹಿಸುತ್ತಾರೆ. ಕೆಲವೊಮ್ಮೆ ಶಿಕ್ಷಕರು ಸಹ ವಿದ್ಯಾರ್ಥಿಯಾಗಿ ತರಗತಿಗಳಲ್ಲಿ ಕುಳಿತು ತಮ್ಮ ವಿದ್ಯಾರ್ಥಿಗಳಿಂದ ಕಲಿಯುತ್ತಾರೆ.

* ಎಲ್ಲಾ ಸಾಮಾಜಿಕ ಮಾಧ್ಯಮ ವೇದಿಕೆಗಳು ಶಿಕ್ಷಕರಿಗೆ ಶುಭಾಶಯಗಳು ಮತ್ತು ಗೌರವಗಳಿಂದ ತುಂಬಿವೆ. ಕೆಲವು ವಿದ್ಯಾರ್ಥಿಗಳುತಮ್ಮ ಶಿಕ್ಷಕರಿಗೆ ಕೈಯಿಂದ ಮಾಡಿದ ಕಾರ್ಡ್‌ಗಳು ಮತ್ತು ಉಡುಗೊರೆಗಳನ್ನು ನೀಡುತ್ತಾರೆ ಆದರೆ ಇತರರು ಹೂಗುಚ್ಛಗಳನ್ನು ಪ್ರಸ್ತುತಪಡಿಸುತ್ತಾರೆ.

* ಕೆಲವು ಶಾಲೆಗಳು ಮತ್ತು ಕಾಲೇಜುಗಳಲ್ಲಿ ಹಳೆಯ ವಿದ್ಯಾರ್ಥಿಗಳು ವಿಶೇಷವಾಗಿ ತಮ್ಮ ಶಿಕ್ಷಕರನ್ನು ಭೇಟಿಯಾಗಲು ಮತ್ತು ಅಭಿನಂದಿಸಲು ಮತ್ತು ಅವರ ಪ್ರಯತ್ನಗಳನ್ನು ಮೌಲ್ಯಯುತವಾಗುವಂತೆ ಮಾಡಲು ಮತ್ತು ಪ್ರಶಂಸಿಸಲು ಒಂದು ಕೂಟವನ್ನು ಏರ್ಪಡಿಸುತ್ತಾರೆ. ಅವರು ತಮ್ಮ ಶಿಕ್ಷಕರಿಗೆ ಪ್ರೀತಿ, ಗೌರವ ಮತ್ತು ಕೃತಜ್ಞತೆಯ ಸಂಕೇತವಾಗಿ ಉಡುಗೊರೆಗಳನ್ನು ನೀಡುತ್ತಾರೆ.

ನಮ್ಮ ಜೀವನದಲ್ಲಿ ಶಿಕ್ಷಕರ ಪಾತ್ರ :

ಯಾವುದೇ ಕಲಿಕೆ ಅಥವಾ ತರಬೇತಿ ಪ್ರಕ್ರಿಯೆಯ ಭಾಗವಾಗಿರುವ ಅಥವಾ ಶಿಕ್ಷಣ ವ್ಯವಸ್ಥೆಯ ಮೂಲಕ ಇರುವ ಎಲ್ಲರಿಗೂ ಶಿಕ್ಷಕರು ಮತ್ತು ಗುರುಗಳ ಮಹತ್ವದ ಬಗ್ಗೆ ತಿಳಿದಿರುತ್ತದೆ. ಶಿಕ್ಷಕರು ಜ್ಞಾನ, ಅರಿವನ್ನು ಹರಡುವ ಮಿಂಚಿನ ದೀಪಗಳಂತಿದ್ದಾರೆ ಮತ್ತು ವಿದ್ಯಾರ್ಥಿಗಳ ಸಹಜ ಬುದ್ಧಿವಂತಿಕೆಯನ್ನು ನಿಜವಾಗಿಯೂ ಪೂರೈಸುವ ಮತ್ತು ಸಮೃದ್ಧಗೊಳಿಸುವಲ್ಲಿ ಸಹಾಯ ಮಾಡುತ್ತಾರೆ. ಮಾರ್ಗದರ್ಶಕರು ಮತ್ತು ಶಿಕ್ಷಕರು ಜ್ಞಾನವನ್ನು ನೀಡುವಲ್ಲಿ ನಿರ್ಣಾಯಕ ಪಾತ್ರವನ್ನು ವಹಿಸುತ್ತಾರೆ. ಆದರೆ ಅವರು ಸಹಾನುಭೂತಿ ಮತ್ತು ಕಲಿಯುವವರ ಗ್ರಹಿಕೆಗಳನ್ನು ರೂಪಿಸಲು ಸಹಾಯ ಮಾಡುತ್ತಾರೆ. ವಿದ್ಯಾರ್ಥಿಗಳು ಬೌದ್ಧಿಕವಾಗಿ ಅಭಿವೃದ್ಧಿ ಹೊಂದಲು ಮತ್ತು ಜೀವನದಲ್ಲಿ ತಾರ್ಕಿಕವಾಗಿ ಪ್ರಗತಿ ಸಾಧಿಸಲು ಸಹಾಯ ಮಾಡುತ್ತಾರೆ.

ಉಪಸಂಹಾರ :

ರಾಷ್ಟ್ರದ ಭವಿಷ್ಯದ ಪ್ರಜೆಗಳನ್ನು ನಿರ್ಮಿಸುವಲ್ಲಿ ಶಿಕ್ಷಕರ ಶ್ರಮವನ್ನು ಯಾವಾಗಲೂ ಪ್ರಶಂಸಿಸಬೇಕು ಮತ್ತು ಶ್ಲಾಘಿಸಬೇಕು. ಶಿಕ್ಷಕರ ದಿನಾಚರಣೆಯನ್ನು ಆಚರಿಸುವುದು ವಿದ್ಯಾರ್ಥಿಗಳ ಕಲಿಕೆ, ಅಭಿವೃದ್ಧಿಯಲ್ಲಿ ಭಾಗಿಯಾದ ಮತ್ತು ಅವುಗಳನ್ನು ರೂಪಿಸುವಲ್ಲಿ ಕೊಡುಗೆ ನೀಡಿದ ಎಲ್ಲರಿಗೂ ಧನ್ಯವಾದ ಮತ್ತು ಪ್ರೀತಿಯನ್ನು ತೋರಿಸುವ ಒಂದು ಮಾರ್ಗವಾಗಿದೆ.

More INFORMATION News  

KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ

  • Don't Block
  • Block for 8 hours
  • Block for 12 hours
  • Block for 24 hours
  • Dont send alerts during 1 am 2 am 3 am 4 am 5 am 6 am 7 am 8 am 9 am 10 am 11 am 12 pm 1 pm 2 pm 3 pm 4 pm 5 pm 6 pm 7 pm 8 pm 9 pm 10 pm 11 pm 12 am to 1 am 2 am 3 am 4 am 5 am 6 am 7 am 8 am 9 am 10 am 11 am 12 pm 1 pm 2 pm 3 pm 4 pm 5 pm 6 pm 7 pm 8 pm 9 pm 10 pm 11 pm 12 am

facebookview

  • ರಾಜಕಾರಣಿಗಳು
  • ನಿತ್ಯಭವಿಷ್ಯ
  • ವೆಬ್ ಸ್ಟೋರಿಸ್

Teachers Day 2023: ಶಿಕ್ಷಕರ ದಿನದ ಇತಿಹಾಸ, ಮಹತ್ವ ಮತ್ತು ಆಚರಣೆಗಳು

ಒಂದು ಉತ್ತಮ ಸಮಾಜ ನಿರ್ಮಾಣದಲ್ಲಿ ಶಿಕ್ಷಕರ ಪಾತ್ರ ಅತ್ಯಮುಲ್ಯವಾದದ್ದು. ತಮ್ಮ ಜೀವನದುದ್ದಕ್ಕೂ ಪ್ರತಿಯೊಬ್ಬರಿಗೂ ಶಿಕ್ಷಣದ ಅರಿವನ್ನು ಮೂಡಿಸಿ ಜ್ಞಾನವನ್ನು ನೀಡುವ ಶಿಕ್ಷಕ ನಮ್ಮ ಪಾಲಿಗೆ ಆ ದೇವರು ಕೊಟ್ಟ ವರ. ಇಂತಹ ಶಿಕ್ಷಕರಿಗೆ ಗೌರವ ಸೂಚಿಸಲು ಶಿಕ್ಷಕರ ದಿನವನ್ನು ಆಚರಿಸಲಾಗುತ್ತದೆ.

ಭಾರತದೆಲ್ಲೆಡೆ ಮಾಜಿ ರಾಷ್ಟ್ರಪತಿ ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಅವರ ಜನ್ಮದಿನದ ಅಂಗವಾಗಿ ಪ್ರತಿ ವರ್ಷ ಸೆಪ್ಟೆಂಬರ್ 5 ರಂದು ಶಿಕ್ಷಕರ ದಿನವನ್ನು ಆಚರಿಸಲಾಗುತ್ತದೆ. ವಿಶ್ವದ ವಿವಿಧ ದೇಶಗಳಲ್ಲಿ ವಿವಿಧ ದಿನಾಂಕಗಳಲ್ಲಿ ಶಿಕ್ಷಕರ ದಿನವನ್ನು ಆಚರಿಸಲಾಗುತ್ತದೆ. ಈ ದಿನ ಹಲವೆಡೆ ರಜೆ ಇದ್ದರೆ, ಇನ್ನೂ ಕೆಲವೆಡೆ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತದೆ.

Teachers Day 2023: Know the history, significance and celebrations of Teachers Day in kannada

ಇಂದು ಈ ಲೇಖನದ ಮೂಲಕ ಶಿಕ್ಷಕರ ದಿನಾಚರಣೆಗೆ ಸಂಬಂಧಿಸಿದ ಕೆಲವು ಮಹತ್ವದ ಮಾಹಿತಿಯನ್ನು ತಿಳಿಯೋಣ. ಇದರಿಂದ ಸಮಾಜದಲ್ಲಿ ಶಿಕ್ಷಕರ ಪ್ರಾಮುಖ್ಯತೆಯನ್ನು ಅರ್ಥಮಾಡಿಕೊಳ್ಳಲು ಸಾಧ್ಯವಾಗುತ್ತದೆ. ಜೊತೆಗೆ ಶಿಕ್ಷಕರ ದಿನವನ್ನು ಏಕೆ, ಯಾವಾಗ ಮತ್ತು ಹೇಗೆ ಆಚರಿಸಲಾಗುತ್ತದೆ ಮುಂತಾದ ಕೆಲವು ಮಾಹಿತಿಯನ್ನು ಪಡೆಯೋಣ.

1888 ರಲ್ಲಿ ಈ ದಿನದಂದು ಜನಿಸಿದ ದೇಶದ ಮೊದಲ ಉಪರಾಷ್ಟ್ರಪತಿ ಮತ್ತು ಮಾಜಿ ರಾಷ್ಟ್ರಪತಿ, ವಿದ್ವಾಂಸ, ತತ್ವಜ್ಞಾನಿ ಮತ್ತು ಭಾರತ ರತ್ನ ಪ್ರಶಸ್ತಿ ಪುರಸ್ಕೃತ ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಅವರ ಜನ್ಮದಿನದ ನೆನಪಿಗಾಗಿ ಸೆಪ್ಟೆಂಬರ್ 5 ರಂದು ಭಾರತದಲ್ಲಿ ಶಿಕ್ಷಕರ ದಿನವನ್ನು ಆಚರಿಸಲಾಗುತ್ತದೆ.

ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಅವರು 1962 ರಲ್ಲಿ ಭಾರತದ ಎರಡನೇ ರಾಷ್ಟ್ರಪತಿಯಾಗಿ ಅಧಿಕಾರ ವಹಿಸಿಕೊಂಡಾಗ, ಅವರ ವಿದ್ಯಾರ್ಥಿಗಳು ಸೆಪ್ಟೆಂಬರ್ 5 ಅನ್ನು ವಿಶೇಷ ದಿನವಾಗಿ ಆಚರಿಸಲು ಅನುಮತಿ ಕೇಳಲು ಅವರನ್ನು ಸಂಪರ್ಕಿಸಿದರು. ಈ ವೇಳೆ ಸರ್ವಪಲ್ಲಿ ರಾಧಾಕೃಷ್ಣನ್ ಅವರು ಸಮಾಜಕ್ಕೆ ಶಿಕ್ಷಕರ ಅಮೂಲ್ಯ ಕೊಡುಗೆಯನ್ನು ಗುರುತಿಸಲು ಸೆಪ್ಟೆಂಬರ್ 5 ಅನ್ನು ಶಿಕ್ಷಕರ ದಿನವನ್ನಾಗಿ ಆಚರಿಸಲು ಸೂಚಿಸಿದರು. ಅಂದಿನಿಂದ ವಿಶ್ವ ಶಿಕ್ಷಕರ ದಿನವನ್ನು ಅಕ್ಟೋಬರ್ 5 ರಂದು ಆಚರಿಸಲಾಗುತ್ತದೆ.

ಶಾಲೆಗಳು, ಕಾಲೇಜುಗಳು, ವಿಶ್ವವಿದ್ಯಾನಿಲಯಗಳು ಮತ್ತು ಶಿಕ್ಷಣ ಸಂಸ್ಥೆಗಳಲ್ಲಿ ಸೆಪ್ಟೆಂಬರ್ 5 ರಂದು ಶಿಕ್ಷಕರ ದಿನವನ್ನು ಆಚರಿಸಲಾಗುತ್ತದೆ. ವಿದ್ಯಾರ್ಥಿಗಳು ತಮ್ಮ ಪ್ರೀತಿಯ ಶಿಕ್ಷಕರಿಗೆ ತಮ್ಮ ಮೆಚ್ಚುಗೆಯನ್ನು ವ್ಯಕ್ತಪಡಿಸಲು ಪ್ರದರ್ಶನಗಳು, ನೃತ್ಯಗಳಂತಹ ವಿವಿಧ ಚಟುವಟಿಕೆಗಳಲ್ಲಿ ತೊಡಗುತ್ತಾರೆ.

ಶಾಲೆ ಅಥವಾ ಕಾಲೇಜುಗಳಲ್ಲಿ ಶಿಕ್ಷಕರಿಗೆ ಕೃತಜ್ಞತೆಯನ್ನು ವ್ಯಕ್ತಪಡಿಸಲು ಮತ್ತು ಅವರ ಜೀವನದಲ್ಲಿ ಶಿಕ್ಷಕರು ಹೊಂದಿರುವ ಆಳವಾದ ಪ್ರಭಾವವನ್ನು ವ್ಯಕ್ತಪಡಿಸಲು ಇದು ಉತ್ತಮ ಅವಕಾಶವಾಗಿದೆ.

ಈ ದಿನ ತಮ್ಮ ನೆಚ್ಚಿನ ಶಿಕ್ಷಕರಿಗೆ ಅವರ ಕೃತಜ್ಞತೆ ಮತ್ತು ಪ್ರೀತಿಯನ್ನು ತಿಳಿಸಲು ಕೈಯಿಂದ ಮಾಡಿದ ಕಾರ್ಡ್‌ಗಳನ್ನು ಒಳಗೊಂಡಂತೆ ಹೂವುಗಳು, ಸಿಹಿತಿಂಡಿಗಳು, ಚಾಕೊಲೇಟ್‌ಗಳು ಮತ್ತು ಇನ್ನಿತರ ಉಡುಗೊರೆಗಳನ್ನು ವಿದ್ಯಾರ್ಥಿಗಳು ನೀಡುತ್ತಾರೆ.

ವಿದ್ಯಾರ್ಥಿಗಳು ತಮ್ಮ ಶಿಕ್ಷಕರಿಗಾಗಿ ಶಾಲಾ-ಕಾಲೇಜುಗಳಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸುತ್ತಾರೆ. ಹಿರಿಯ ವಿದ್ಯಾರ್ಥಿಗಳು ತರಗತಿಗಳ ಉಸ್ತುವಾರಿ ವಹಿಸುತ್ತಾರೆ. ಈ ವಿದ್ಯಾರ್ಥಿಗಳು ತಮ್ಮ ಶಿಕ್ಷಕರೊಂದಿಗೆ ಸ್ಮರಣೀಯವನ್ನು ಕಳೆಯುತ್ತಾರೆ.

ಸ್ವಾತಂತ್ರ್ಯ ಪೂರ್ವದಲ್ಲಿ ಸನಾತನ ವಾದಗಳು ನಮ್ಮನ್ನು ಕತ್ತಲಲ್ಲಿ ಇಟ್ಟಿದ್ದವು- ಎಚ್.ಸಿ ಮಹದೇವಪ್ಪ

teachers day teachers students celebration history ಶಿಕ್ಷಕರ ದಿನಾಚರಣೆ ಶಿಕ್ಷಕರು ಆಚರಣೆ ಇತಿಹಾಸ

 Atal Setu: ಅಟಲ್ ಸೇತುವೆಯಿಂದ ಜಿಗಿಯಲು ಮಹಿಳೆ ಯತ್ನ; ಚಾಲಕ, ಪೊಲೀಸರಿಂದ ರಕ್ಷಣೆ ವಿಡಿಯೋ ವೈರಲ್‌

Atal Setu: ಅಟಲ್ ಸೇತುವೆಯಿಂದ ಜಿಗಿಯಲು ಮಹಿಳೆ ಯತ್ನ; ಚಾಲಕ, ಪೊಲೀಸರಿಂದ ರಕ್ಷಣೆ ವಿಡಿಯೋ ವೈರಲ್‌

 Siddaramaiah: ಕಾನೂನು ತಜ್ಞರ ಜೊತೆ ಚರ್ಚೆ; ಸಿಎಂ ಸಿದ್ದರಾಮಯ್ಯ ಮುಂದಿರುವ ಆಯ್ಕೆಗಳೇನು?

Siddaramaiah: ಕಾನೂನು ತಜ್ಞರ ಜೊತೆ ಚರ್ಚೆ; ಸಿಎಂ ಸಿದ್ದರಾಮಯ್ಯ ಮುಂದಿರುವ ಆಯ್ಕೆಗಳೇನು?

ಸಿಎಂ ವಿರುದ್ಧ ಪ್ರಾಸಿಕ್ಯೂಷನ್‌ಗೆ ಅನುಮತಿ ರಾಜಕೀಯ ಷಡ್ಯಂತ್ರ- ಕೈ ನಾಯಕರಿಂದ ವಾಗ್ದಾಳಿ

ಸಿಎಂ ವಿರುದ್ಧ ಪ್ರಾಸಿಕ್ಯೂಷನ್‌ಗೆ ಅನುಮತಿ ರಾಜಕೀಯ ಷಡ್ಯಂತ್ರ- ಕೈ ನಾಯಕರಿಂದ ವಾಗ್ದಾಳಿ

Latest updates.

ಡೊನಾಲ್ಡ್ ಟ್ರಂಪ್‌ಗೆ ಹರಕುಬಾಯಿ? ಸೋಷಿಯಲ್ ಮೀಡಿಯಾದಲ್ಲಿ ಜನ ಏನಂದ್ರು?

  • Block for 8 hours
  • Block for 12 hours
  • Block for 24 hours
  • Don't block

about teachers day in kannada essay

  • Click on the Menu icon of the browser, it opens up a list of options.
  • Click on the “Options ”, it opens up the settings page,
  • Here click on the “Privacy & Security” options listed on the left hand side of the page.
  • Scroll down the page to the “Permission” section .
  • Here click on the “Settings” tab of the Notification option.
  • A pop up will open with all listed sites, select the option “ALLOW“, for the respective site under the status head to allow the notification.
  • Once the changes is done, click on the “Save Changes” option to save the changes.

facebookview

Vidyamana

ಶಿಕ್ಷಕರ ಬಗ್ಗೆ ಪ್ರಬಂಧ | Essay on Teachers in Kannada

'  data-src=

ಶಿಕ್ಷಕರ ಬಗ್ಗೆ ಪ್ರಬಂಧ Essay on Teachers in Kannada Prabandha on Teachers in Kannada Shikshakara Bagge Prabandha ಶಿಕ್ಷಕರ ಪ್ರಾಮುಖ್ಯತೆ ಕುರಿತು ಪ್ರಬಂಧ Importance of Teacher Essay in Kannada

ಶಿಕ್ಷಕರ ಬಗ್ಗೆ ಪ್ರಬಂಧ

ಶಿಕ್ಷಕರ ಬಗ್ಗೆ ಪ್ರಬಂಧ | Essay on Teachers in Kannada

ಈ ಲೇಖನದಲ್ಲಿ ನಾವು ಶಿಕ್ಷಕರ ಬಗ್ಗೆ ಪ್ರಬಂಧವನ್ನು ರಚಿಸಿದ್ದು, ಈ ಪ್ರಬಂಧದಲ್ಲಿ ಶಿಕ್ಷಕರ ಮೌಲ್ಯ, ಪ್ರಮುಖ್ಯತೆ ಹಾಗೂ ವಿದ್ಯಾರ್ಥಿ ಜೀವನದಲ್ಲಿ ಅವರ ಕರ್ತವ್ಯ ಕುರಿತು ಸರಳವಾಗಿ ವಿವರಿಸಲಾಗಿದೆ.

ಜೀವನದಲ್ಲಿ ಗೆಲುವು ಮತ್ತು ಯಶಸ್ಸನ್ನು ಸಾಧಿಸಲು ಶಿಕ್ಷಣವನ್ನು ಅತ್ಯಂತ ಶಕ್ತಿಶಾಲಿ ಅಸ್ತ್ರವೆಂದು ಪರಿಗಣಿಸಲಾಗಿದೆ. ಶಿಕ್ಷಕರಿಗೆ ಈ ಪ್ರಮುಖ ಜವಾಬ್ದಾರಿಯನ್ನು ನೀಡಲಾಗಿದೆ ಮತ್ತು ಅವರು ದೇಶದ ಭವಿಷ್ಯ ಮತ್ತು ಯುವಕರ ಜೀವನವನ್ನು ರೂಪಿಸಲು ಮತ್ತು ರೂಪಿಸಲು ಕೆಲಸ ಮಾಡುತ್ತಾರೆ. ಶಿಕ್ಷಕರು ಶಿಕ್ಷಣದ ಕಡೆಗೆ ಪ್ರಮುಖ ಜವಾಬ್ದಾರಿಯನ್ನು ವಹಿಸುತ್ತಾರೆ ಮತ್ತು ಮಕ್ಕಳ ವರ್ತಮಾನ ಮತ್ತು ಭವಿಷ್ಯವನ್ನು ಮಾಡುತ್ತಾರೆ. ಒಬ್ಬ ಶಿಕ್ಷಕ ತನ್ನ ಜೀವನದುದ್ದಕ್ಕೂ ಸಾಕಷ್ಟು ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ಮತ್ತು ಶಿಕ್ಷಣ ನೀಡುವ ಮೂಲಕ ಉತ್ತಮ ಸಮಾಜವನ್ನು ನಿರ್ಮಿಸುವಲ್ಲಿ ಮಹತ್ತರವಾದ ಕೆಲಸವನ್ನು ಮಾಡುತ್ತಾನೆ.

ಶಿಕ್ಷಕನು ಜ್ಞಾನ, ಸಮೃದ್ಧಿ ಮತ್ತು ಬೆಳಕಿನ ಉತ್ತಮ ಮೂಲವಾಗಿದ್ದು, ಇದರಿಂದ ಜೀವನಪರ್ಯಂತ ಪ್ರಯೋಜನಗಳನ್ನು ಪಡೆಯಬಹುದು. ಪ್ರತಿಯೊಬ್ಬ ಶಿಕ್ಷಕರು ತಮ್ಮ ವಿದ್ಯಾರ್ಥಿಗೆ ತಮ್ಮ ಮಾರ್ಗವನ್ನು ಆಯ್ಕೆ ಮಾಡಲು ಸಹಾಯ ಮಾಡುತ್ತಾರೆ. ಶಿಕ್ಷಣ ಕ್ಷೇತ್ರದಲ್ಲಿ ಶಿಕ್ಷಕರು ಪ್ರಮುಖ ಪಾತ್ರ ವಹಿಸುತ್ತಾರೆ. ಒಬ್ಬ ಶಿಕ್ಷಕ ಮಾತ್ರ ತನ್ನ ವಿದ್ಯಾರ್ಥಿಗೆ ಹಿರಿಯರನ್ನು ಗೌರವಿಸಲು ಮತ್ತು ಗೌರವಿಸಲು ಕಲಿಸುತ್ತಾನೆ.

ಶಿಕ್ಷಕರ ಜವಾಬ್ದಾರಿ ದೊಡ್ಡದು. ಅವರು ಮಾನವ ಸಮಾಜಕ್ಕೆ ಸರಿಯಾದ ನಿರ್ದೇಶನವನ್ನು ನೀಡಬಲ್ಲರು. ಇಂದಿನ ಮಕ್ಕಳೇ ನಾಳಿನ ಭವಿಷ್ಯ. ಮಕ್ಕಳು ವಿದ್ಯಾವಂತರಾದರೆ ದೇಶಕ್ಕೆ ಕೀರ್ತಿ ತರುತ್ತಾರೆ. ಅವರು ಸುಸಂಸ್ಕೃತರಾದರೆ ದೇಶ ಸುಸಂಸ್ಕೃತವಾಗುತ್ತದೆ. ಶಿಕ್ಷಕರು ಮಕ್ಕಳಲ್ಲಿ ಉತ್ತಮ ಮೌಲ್ಯಗಳನ್ನು ಬಿತ್ತಿದರೆ ಅದರಿಂದ ದೇಶಕ್ಕೆ ಲಾಭವಾಗುತ್ತದೆ.

ವಿಷಯ ಮಂಡನೆ:

ಜೀವನದಲ್ಲಿ ಸರಿಯಾದ ಮಾರ್ಗವನ್ನು ಆಯ್ಕೆ ಮಾಡಲು ಮತ್ತು ಕೆಟ್ಟ ಪರಿಸ್ಥಿತಿಯಲ್ಲಿ ಸರಿಯಾದ ನಿರ್ಧಾರವನ್ನು ತೆಗೆದುಕೊಳ್ಳಲು ಅನುವು ಮಾಡಿಕೊಡಲು ಶಿಕ್ಷಕನನ್ನು ದೇವರು ಭೂಮಿಗೆ ಕಳುಹಿಸುತ್ತಾನೆ. ಶಿಕ್ಷಕರು ತಮ್ಮ ಬಾಲ್ಯದಿಂದಲೇ ಮಕ್ಕಳನ್ನು ಮುನ್ನಡೆಸುತ್ತಾರೆ ಮತ್ತು ಅವರನ್ನು ಮಾನಸಿಕ, ಸಾಮಾಜಿಕ ಮತ್ತು ಬೌದ್ಧಿಕವಾಗಿ ಸಮರ್ಥರನ್ನಾಗಿ ಮಾಡುತ್ತಾರೆ. ಶಿಕ್ಷಕರು ನಮ್ಮ ನಡುವೆ ಇರುವ ಸಾಮಾನ್ಯ ಜನರಂತೆ ಆದರೆ ಅವರು ತಮ್ಮ ವಿದ್ಯಾರ್ಥಿಗಳಿಗೆ ಕಲಿಸುವ ವಿಭಿನ್ನ ಕಾರ್ಯವನ್ನು ಆರಿಸಿಕೊಳ್ಳುತ್ತಾರೆ.

ಭಾರತದಂತಹ ದೇಶದಲ್ಲಿ ಗುರುಗಳಿಗೆ ಯಾವಾಗಲೂ ವಿಶೇಷ ಸ್ಥಾನ ನೀಡಲಾಗಿದೆ. ಅವರಿಗೂ ಸಹ ದೇವರು ಮತ್ತು ಹೆತ್ತವರಿಗಿಂತ ಹೆಚ್ಚಿನ ಸ್ಥಾನವನ್ನು ನೀಡಲಾಗಿದೆ. ಇಂತಹ ಪರಿಸ್ಥಿತಿಯಲ್ಲಿ, ಶಿಕ್ಷಕರ ದಿನಾಚರಣೆಯು ಭಾರತದಲ್ಲಿ ಸಾಮಾನ್ಯ ದಿನವಲ್ಲ, ಆದರೆ ಗುರುಗಳ ಮೇಲಿನ ದೇಶವು ನಂಬಿಕೆ ಮತ್ತು ಅವರ ಮೇಲಿನ ಅಪಾರ ಗೌರವದಿಂದಾಗಿ, ಶಿಕ್ಷಕರ ದಿನವು ವಿಶೇಷ ಪ್ರಾಮುಖ್ಯತೆಯ ದಿನವಾಗುತ್ತದೆ. ಶಿಕ್ಷಕರ ದಿನದಂದು, ಭಾರತದ ಪ್ರತಿಯೊಂದು ಸಣ್ಣ ಮತ್ತು ದೊಡ್ಡ ಶಾಲೆ, ತರಬೇತಿ ಕೇಂದ್ರ, ಕಾಲೇಜು ಇತ್ಯಾದಿಗಳಲ್ಲಿ ವಿದ್ಯಾರ್ಥಿಗಳು ಈ ದಿನವನ್ನು ವಿಶೇಷವಾಗಿಸಲಗುತ್ತದೆ. ಶಿಕ್ಷಕರ ದಿನದ ಸಂದರ್ಭದಲ್ಲಿ, ಪ್ರತಿಯೊಬ್ಬರೂ ತಮ್ಮ ಗುರುಗಳು, ಶಿಕ್ಷಕರು ಮತ್ತು ಮಾರ್ಗದರ್ಶಕರನ್ನು ನೆನಪಿಸಿಕೊಳ್ಳುತ್ತಾರೆ, ಅವರ ಅನುಭವಗಳನ್ನು ಮತ್ತು ಅವರ ಜೀವನದಲ್ಲಿ ಶಿಕ್ಷಕರ ಕೊಡುಗೆಗಳನ್ನು ಹಂಚಿಕೊಳ್ಳುತ್ತಾರೆ. ಈ ದಿನದಂದು ಆಯೋಜಿಸಲಾದ ವರ್ಣರಂಜಿತ ಕಾರ್ಯಕ್ರಮದಲ್ಲಿ, ವಿದ್ಯಾರ್ಥಿಗಳು ತಮ್ಮ ಶಿಕ್ಷಕರ ಮುಂದೆ ಶಿಕ್ಷಕರ ದಿನದಂದು ಭಾಷಣ ಮಾಡುತ್ತಾರೆ. ಅನೇಕ ಸ್ಥಳಗಳಲ್ಲಿ ಚರ್ಚಾ ಸ್ಪರ್ಧೆಗಳನ್ನು ಸಹ ಆಯೋಜಿಸಲಾಗುತ್ತದೆ.

ಶಿಕ್ಷಕರ ಪ್ರಾಮುಖ್ಯತೆ :

ಶಿಕ್ಷಕರ ಜವಾಬ್ದಾರಿ ದೊಡ್ಡದು. ಅವರು ಮಾನವ ಸಮಾಜಕ್ಕೆ ಸರಿಯಾದ ನಿರ್ದೇಶನವನ್ನು ನೀಡಬಲ್ಲರು. ಇಂದಿನ ಮಕ್ಕಳೇ ನಾಳಿನ ಭವಿಷ್ಯ. ಮಕ್ಕಳು ವಿದ್ಯಾವಂತರಾದರೆ ದೇಶಕ್ಕೆ ಕೀರ್ತಿ ತರುತ್ತಾರೆ. ಅವರು ಸುಸಂಸ್ಕೃತರಾದರೆ ದೇಶ ಸುಸಂಸ್ಕೃತವಾಗುತ್ತದೆ. ಶಿಕ್ಷಕರು ಮಕ್ಕಳಲ್ಲಿ ಉತ್ತಮ ಮೌಲ್ಯಗಳನ್ನು ಬಿತ್ತಿದರೆ ಅದರಿಂದ ದೇಶಕ್ಕೆ ಲಾಭವಾಗುತ್ತದೆ. ಯಾವ ಮಗುವೂ ಅವಿದ್ಯಾವಂತರಾಗದಂತೆ ಶಿಕ್ಷಣ ಎಲ್ಲೆಡೆ ಹರಡಬೇಕು, ಅದರ ಹೊರೆ ಶಿಕ್ಷಕರ ಮೇಲಿದೆ. ಅಧ್ಯಾಪಕರು ಬೇಕಿದ್ದರೆ ಉನ್ನತ, ಕೀಳು, ಜಾತಿ ತಾರತಮ್ಯ, ಅಸೂಯೆ, ದ್ವೇಷ ಇತ್ಯಾದಿಗಳಿಗೆ ಸ್ಥಾನವೇ ಇಲ್ಲದ ಸಮಾಜವನ್ನು ಸೃಷ್ಟಿಸಬಹುದು.

ವಿದ್ಯಾರ್ಥಿ ಜೀವನದಲ್ಲಿ ಮಾತ್ರವಲ್ಲದೆ ಪ್ರತಿಯೊಂದು ಕ್ಷೇತ್ರದಲ್ಲೂ ಶಿಕ್ಷಕರಿಗೆ ಎತ್ತರದ ಸ್ಥಾನ ಹಾಗೂ ಮಹತ್ವವಿದೆ. ಶಿಕ್ಷಕನು ತನ್ನ ವಿದ್ಯಾರ್ಥಿಗಳಿಗೆ ರವಾನಿಸುವಬಹುದಾದ ಎಲ್ಲಾ ಒಳ್ಳೆಯ ಗುಣಗಳನ್ನು ಹೊಂದಿದ್ದಾನೆ. ಪ್ರತಿಯೊಬ್ಬರೂ ಸ್ವೀಕರಿಸುವ ಸಾಮರ್ಥ್ಯವನ್ನು ಹೊಂದಿರುವುದಿಲ್ಲ ಎಂದು ಶಿಕ್ಷಕರಿಗೆ ತಿಳಿದಿದೆ, ಆದ್ದರಿಂದ ಶಿಕ್ಷಕನು ತನ್ನ ಪ್ರತಿಯೊಬ್ಬ ವಿದ್ಯಾರ್ಥಿಯ ಸಾಮರ್ಥ್ಯವನ್ನು ಗಮನಿಸುತ್ತಾನೆ ಮತ್ತು ಅದಕ್ಕೆ ಅನುಗುಣವಾಗಿ ಮಗುವಿಗೆ ಶಿಕ್ಷಣವನ್ನು ನೀಡಲಲು ಸಹಾಯ ಮಾಡುತ್ತಾನೆ.

ಶಿಕ್ಷಣದಲ್ಲಿ ತಂತ್ರಜ್ಞಾನದ ಬಳಕೆ ಪ್ರಬಂಧ | Use of Technology in…

ಭಗತ್‌ ಸಿಂಗ್‌ ಬಗ್ಗೆ ಪ್ರಬಂಧ | Bhagat Singh Essay in Kannada

ಕನಕದಾಸರ ಬಗ್ಗೆ ಪ್ರಬಂಧ | Kanaka Dasara Bagge Prabandha in…

ಅವರು ತನ್ನ ವಿದ್ಯಾರ್ಥಿಗೆ ಸರಿ ಮತ್ತು ತಪ್ಪು, ಧರ್ಮ ಮತ್ತು ಅಧರ್ಮ, ಗೌರವ ಮತ್ತು ಅಗೌರವದ ನಡುವಿನ ವ್ಯತ್ಯಾಸವನ್ನು ಸ್ಪಷ್ಟವಾಗಿ ವಿವರಿಸುತ್ತಾನೆ. ಶಿಕ್ಷಕನು ತನ್ನ ವಿದ್ಯಾರ್ಥಿಯನ್ನು ಜ್ಞಾನ, ಕೌಶಲ್ಯ ಮತ್ತು ಸಕಾರಾತ್ಮಕ ನಡವಳಿಕೆಯೊಂದಿಗೆ ಸಜ್ಜುಗೊಳಿಸುತ್ತಾನೆ, ಇದರಿಂದಾಗಿ ವಿದ್ಯಾರ್ಥಿಗಳು ಎಂದಿಗೂ ಕಡುವುದಿಲ್ಲ.

ಸಮಯದ ಬಳಕೆ, ಸಮಯದ ನಿಯಮ ಮತ್ತು ಸಮಯಪಾಲನೆ ಬಗ್ಗೆ ಅವರಿಗೆ ಅರಿವು ಮೂಡಿಸುತ್ತಾನೆ. ಅವರು ಯಾವಾಗಲೂ ತಮ್ಮ ವಿದ್ಯಾರ್ಥಿಗಳಿಗೆ ಶಿಕ್ಷಣದ ಗುರಿಯ ಬಗ್ಗೆ ವಿವರಿಸುತ್ತಾರೆ. ಒಬ್ಬ ಒಳ್ಳೆಯ ಶಿಕ್ಷಕ ತನ್ನ ವಿದ್ಯಾರ್ಥಿಗಳ ಮೇಲೆ ಉತ್ತಮ ಪ್ರಭಾವ ಬೀರುತ್ತಾನೆ. ಯಾವುದೇ ವಿದ್ಯಾರ್ಥಿ ತಪ್ಪು ಮಾಡಿದಾಗ, ಶಿಕ್ಷಕರು ಅವರಿಗೆ ಪಾಠ ಕಲಿಸುತ್ತಾರೆ ಮತ್ತು ಅವರ ತಪ್ಪಿನ ಅರಿವನ್ನು ಅರಿಯಲು ಸಹಾಯ ಮಾಡುತ್ತಾನೆ ಮಾಡುತ್ತಾನೆ.

ಯಾವುದೇ ಸಮಾಜವು ಅಭಿವೃದ್ಧಿ ಹೊಂದಲು, ಅದರ ಜನರು ವಿದ್ಯಾವಂತರಾಗಿರುವುದು ಮುಖ್ಯ ಮತ್ತು ಅಂತಹ ಸಮಾಜವನ್ನು ಒಬ್ಬ ಶಿಕ್ಷಕ ಮಾತ್ರ ನಿರ್ಮಿಸಲು ಸಾಧ್ಯ. ಅಂದರೆ, ಶಿಕ್ಷಕರನ್ನು ನಾವು ದೇಶದ ಪ್ರಗತಿಯ ಸೂಚಕ ಎಂದು ಪರಿಗಣಿಸಬಹುದು. ಅವರು ಮಕ್ಕಳಿಗೆ ಶಿಕ್ಷಣ ನೀಡುತ್ತಾರೆ ಮತ್ತು ಅವರ ಜ್ಞಾನದ ಸೆಳವುಗಳಿಂದ ಬೆಳಗಲು ಕಲಿಸುತ್ತಾರೆ, ಇದರಿಂದ ಮಕ್ಕಳು ಸೂರ್ಯನಂತೆ ಹೊಳೆಯುವುದನ್ನು ಕಲಿಯುತ್ತಾರೆ, ದಿಗಂತದಿಂದ ಹೊರಹೊಮ್ಮುವ ಸಣ್ಣ ಕಿರಣಗಳ ಮೂಲಕ ಪ್ರಯಾಣಿಸಿ, ಆಕಾಶದ ಸಮತಲಕ್ಕೆ ಬಂದು ದೇಶಕ್ಕೆ ಪ್ರಶಸ್ತಿಗಳನ್ನು ತರುತ್ತಾರೆ.

ಒಬ್ಬ ವ್ಯಕ್ತಿ ಎಷ್ಟೇ ದೊಡ್ಡವನಾಗಿದ್ದರೂ, ಅವನಿಗೆ ಖಂಡಿತವಾಗಿಯೂ ಒಂದು ಹಂತದಲ್ಲಿ ಮಾರ್ಗದರ್ಶಿ ಬೇಕು ಮತ್ತು ಆ ಮಾರ್ಗದರ್ಶಿ ಅದೇ ಗುರು ಅಂದರೆ ಶಿಕ್ಷಕ. ಗುರುಗಳ ವ್ಯಾಪ್ತಿಯು ಕೇವಲ ಶಾಲಾ ಪುಸ್ತಕಗಳಿಗೆ ಸೀಮಿತವಾಗಿಲ್ಲ, ಅವರು ಅಗತ್ಯವಿದ್ದಾಗ ನಿಜವಾದ ಸ್ನೇಹಿತರಾಗುತ್ತಾರೆ ಮತ್ತು ನಮಗೆ ಎಲ್ಲಾ ರೀತಿಯಲ್ಲಿ ಸಹಾಯ ಮಾಡುತ್ತಾರೆ.

ನಮ್ಮ ಜೀವನದಲ್ಲಿ ಶಿಕ್ಷಕ ಬಹಳ ಮುಖ್ಯ. ಶಿಕ್ಷಕರಿಲ್ಲದೆ ಜೀವನದಲ್ಲಿ ಮಾನಸಿಕವಾಗಿ, ಸಾಮಾಜಿಕವಾಗಿ ಮತ್ತು ಬೌದ್ಧಿಕವಾಗಿ ಅಭಿವೃದ್ಧಿ ಹೊಂದಲು ಸಾಧ್ಯವಿಲ್ಲ. ಶಿಕ್ಷಕರು ಎಂದಿಗೂ ಕೆಟ್ಟವರಲ್ಲ, ಅದು ಅವರ ಬೋಧನೆಯ ವಿಧಾನವನ್ನು ಅವಲಂಬಿಸಿರುತ್ತದೆ, ಅದು ಪರಸ್ಪರ ಭಿನ್ನವಾಗಿರುತ್ತದೆ ಮತ್ತು ವಿದ್ಯಾರ್ಥಿಗಳ ಮನಸ್ಸಿನಲ್ಲಿ ಅವರ ಚಿತ್ರವನ್ನು ರಚಿಸುತ್ತದೆ.

ಅಜ್ಞಾನದ ಅಂಧಕಾರವನ್ನು ಹೋಗಲಾಡಿಸಲು ನಮಗೆ ಸಹಾಯ ಮಾಡುವ ಎಲ್ಲ ಶಿಕ್ಷಕರನ್ನು ರಾಷ್ಟ್ರವು ಗೌರವಿಸುತ್ತದೆ. ಶಿಕ್ಷಕನು ಜ್ಞಾನದ ಸಾಗರ, ನಾವು ಸಾಧ್ಯವಾದಷ್ಟು ಕಾಲ ಅವರಿಂದ ಕೆಲವು ಅಥವಾ ಇತರ ವಿಷಯಗಳ ಬಗ್ಗೆ ಜ್ಞಾನವನ್ನು ಪಡೆಯುತ್ತಲೇ ಇರಬೇಕು.

ಉತ್ತಮ ಅರ್ಹ ಶಿಕ್ಷಕರನ್ನು ಸರ್ಕಾರ ಗೌರವಿಸುತ್ತದೆ. ಪ್ರತಿ ವರ್ಷ ಸೆಪ್ಟೆಂಬರ್ 5 ರಂದು ಶಿಕ್ಷಕರ ಗೌರವಾರ್ಥ ಶಿಕ್ಷಕರ ದಿನವನ್ನಾಗಿ ಆಚರಿಸಲಾಗುತ್ತದೆ. ಈ ದಿನ ಮಕ್ಕಳು ಭಾಗವಹಿಸುವ ಶಾಲೆಗಳಲ್ಲಿ ವಿಶೇಷ ಕಾರ್ಯಕ್ರಮಗಳನ್ನು ನಡೆಸಲಾಗುತ್ತದೆ. ರಾಷ್ಟ್ರಪತಿಗಳು ಅರ್ಹ ಶಿಕ್ಷಕರಿಗೆ ಪದಕ ಮತ್ತು ಪ್ರಶಸ್ತಿಗಳನ್ನು ನೀಡುತ್ತಾರೆ. ಅಜ್ಞಾನದ ಅಂಧಕಾರವನ್ನು ಹೋಗಲಾಡಿಸುವಲ್ಲಿ ಸಹಕಾರಿಯಾದ ಶಿಕ್ಷಕರಿಗೆ ರಾಷ್ಟ್ರದ ನಮನಗಳು.

ಪ್ರತಿ ವರ್ಷ ಶಿಕ್ಷಕರ ದಿನಾಚರಣೆಯನ್ನು ಯಾವಾಗ ಆಚರಿಸಲಾಗುತ್ತದೆ?

ಪ್ರತಿ ವರ್ಷ ಸೆಪ್ಟೆಂಬರ್ 5 ರಂದು ಶಿಕ್ಷಕರ ಶಿಕ್ಷಕರ ದಿನವನ್ನಾಗಿ ಆಚರಿಸಲಾಗುತ್ತದೆ. 

ಶಿಕ್ಷಕರು ವಿದ್ಯಾರ್ಥಿಗಳಿಗೆ ಯಾವುದರ ನಡುವಿನ ವತ್ಯಾಸವನ್ನುಹಾಗೂ ಏನನ್ನು ಕಲಿಸುತ್ತಾರೆ?

ಶಿಕ್ಷಕರು ತನ್ನ ವಿದ್ಯಾರ್ಥಿಗೆ ಸರಿ ಮತ್ತು ತಪ್ಪು, ಧರ್ಮ ಮತ್ತು ಅಧರ್ಮ, ಗೌರವ ಮತ್ತು ಅಗೌರವದ ನಡುವಿನ ವ್ಯತ್ಯಾಸವನ್ನು ಸ್ಪಷ್ಟವಾಗಿ ವಿವರಿಸುತ್ತಾನೆ. ಶಿಕ್ಷಕನು ತನ್ನ ವಿದ್ಯಾರ್ಥಿಯನ್ನು ಜ್ಞಾನ, ಕೌಶಲ್ಯ ಮತ್ತು ಸಕಾರಾತ್ಮಕ ನಡವಳಿಕೆಯೊಂದಿಗೆ ಸಜ್ಜುಗೊಳಿಸುತ್ತಾನೆ, ಇದರಿಂದಾಗಿ ವಿದ್ಯಾರ್ಥಿಗಳು ಎಂದಿಗೂ ಕಡುವುದಿಲ್ಲ.

ಅರ್ಹ ಶಿಕ್ಷಕರುಗಳನ್ನು ಹೇಗೆ ಗೌರವಿಸಲಾಗುತ್ತದೆ?

ಉತ್ತಮ ಅರ್ಹ ಶಿಕ್ಷಕರನ್ನು ರಾಷ್ಟ್ರಪತಿಗಳು ಪದಕ ಮತ್ತು ಪ್ರಶಸ್ತಿಗಳನ್ನು ನೀಡಿ ಗೌರವಿಸಿ. ಅಜ್ಞಾನದ ಅಂಧಕಾರವನ್ನು ಹೋಗಲಾಡಿಸುವಲ್ಲಿ ಸಹಕಾರಿಯಾದ ಶಿಕ್ಷಕರಿಗೆ ರಾಷ್ಟ್ರ ನಮನ ಸಲ್ಲಿಸಲಾಗುವುದು.

ಸಮೂಹ ಮಾಧ್ಯಮಗಳು ಪ್ರಬಂಧ

ಭಾರತದ ರಾಷ್ಟ್ರೀಯ ಹಬ್ಬಗಳ ಕುರಿತು ಪ್ರಬಂಧ

ಪರಿಸರ ಸಂರಕ್ಷಣೆ ಪ್ರಬಂಧ ಕನ್ನಡದಲ್ಲಿ

'  data-src=

ಶಿಕ್ಷಣದಲ್ಲಿ ತಂತ್ರಜ್ಞಾನದ ಬಳಕೆ ಪ್ರಬಂಧ | Use of Technology in Education Essay in Kannada

ಕನಕದಾಸರ ಬಗ್ಗೆ ಪ್ರಬಂಧ | Kanaka Dasara Bagge Prabandha in Kannada

ನಿರುದ್ಯೋಗ ಪ್ರಬಂಧ | Nirudyoga Prabandha in Kannada

You must be logged in to post a comment.

about teachers day in kannada essay

  • Click on the Menu icon of the browser, it opens up a list of options.
  • Click on the “Options ”, it opens up the settings page,
  • Here click on the “Privacy & Security” options listed on the left hand side of the page.
  • Scroll down the page to the “Permission” section .
  • Here click on the “Settings” tab of the Notification option.
  • A pop up will open with all listed sites, select the option “ALLOW“, for the respective site under the status head to allow the notification.
  • Once the changes is done, click on the “Save Changes” option to save the changes.

about teachers day in kannada essay

ಶಿಕ್ಷಕರ ದಿನಾಚರಣೆ 2020: ನಮ್ಮೆಲ್ಲರ ಗುರುವಿನ ಹಿರಿಮೆ ಸ್ಮರಿಸುವ ದಿನ

ಶಿಕ್ಷಕರದಿನ ಪ್ರತಿಯೊಬ್ಬರಿಗೂ ವಿಶೇಷ ಸಂದರ್ಭವಾಗಿದೆ. ವಿಶೇಷವಾಗಿ ಎಲ್ಲಾ ವಿದ್ಯಾರ್ಥಿಗಳು ಮತ್ತು ಶಿಕ್ಷಕರು. ಭಾರತದಲ್ಲಿ 1962 ರಿಂದ ಅವರ ಜನ್ಮದಿನವೆಂದು ಸೆಪ್ಟೆಂಬರ್ 5 ರಂದು ಶಿಕ್ಷಕರ ದಿನವಾಗಿ ಆಚರಿಸಲಾಗುತ್ತದೆ. ದೇವತೆಯಾದ ಮಾತೃ ಪಿತೃ ದೇವೋಭವ - ಆಚಾರ್ಯ ದೇವೋಭವ" ಹಿರಿಯರು ಹೇಳಿದರು. ತಾಯಿ ಮತ್ತು ತಂದೆ ಮುಂದಿನ ಗುರು ಎಂದು ಸ್ಪಷ್ಟವಾಗುತ್ತದೆ.

"ಶಿಕ್ಷಕ" ಪದಕ್ಕೆ ವಿಶೇಷ ಅರ್ಥವಿದೆ. "ಗು" ಎಂದರೆ ಕತ್ತಲೆ. "ರು" ತೆಗೆದುಹಾಕಲು ಅರ್ಥ. ಕತ್ತಲೆಯು ಅಜ್ಞಾನ ಎಂದು ಆದ್ದರಿಂದ ಶಿಕ್ಷಕರ ಹೆಸರು ನೆಲೆಸಿದೆ.

ಸರ್ವೆಪಳ‍್ಳಿ ರಾಧಾಕೃಷ್ಣನ್ 5 ಸೆಪ್ಟೆಂಬರ್ (1888 - 17 ಏಪ್ರಿಲ್ 1975) ಒಬ್ಬ ಭಾರತೀಯ ತತ್ವಜ್ಞಾನಿ ಮತ್ತು ರಾಜಕಾರಣಿಯಾಗಿದ್ದು, ಅವರು ಭಾರತದ ಮೊದಲ ಉಪಾಧ್ಯಕ್ಷರಾಗಿದ್ದರು (1952-1962) ಮತ್ತು 1962 ರಿಂದ 1967 ರವರೆಗಿನ ಭಾರತದ ಎರಡನೇ ಅಧ್ಯಕ್ಷರಾಗಿದ್ದರು. ಅವರು ಅಧ್ಯಕ್ಷರಾದಾಗ, ಅವರ ಹಲವು ವಿದ್ಯಾರ್ಥಿಗಳು ಮತ್ತು ಸ್ನೇಹಿತರು ಅವರನ್ನು ತಮ್ಮ ಜನ್ಮದಿನವನ್ನು ಆಚರಿಸಲು ಸೆಪ್ಟೆಂಬರ್ 5, ರಂದು ವಿನಂತಿಸಿದರು. ಅದಕ್ಕೆ ಉತ್ತರಿಸಿದ ಅವರು, "ನನ್ನ ಜನ್ಮದಿನವನ್ನು ಆಚರಿಸಲು ಬದಲಾಗಿ, ಸೆಪ್ಟೆಂಬರ್ 5 ರ ಶಿಕ್ಷಕರ ದಿನವಾಗಿ ಆಚರಿಸಿದರೆ ಅದು ನನ್ನ ಹೆಮ್ಮೆ" ಎಂದಿದ್ದರು. ನಂತರ ಅವರ ಜನ್ಮದಿನವನ್ನು ಭಾರತದಲ್ಲಿ ಶಿಕ್ಷಕರ ದಿನವಾಗಿ ಆಚರಿಸಲಾಗುತ್ತದೆ.

about teachers day in kannada essay

ಮಕ್ಕಳ ಭವಿಷ್ಯವನ್ನು ರೂಪಿಸುವ, ಪಠ್ಯಕ್ಕಿಂತಲೂ ಹೆಚ್ಚಾಗಿ ವಿದ್ಯಾರ್ಥಿಗಳಲ್ಲಿ ವಿವೇಕ, ತಾಳ್ಮೆ, ದೂರದೃಷ್ಟಿ, ಮಾನವತೆಯನ್ನು ಬೋಧಿಸುವ, ತನ್ಮೂಲಕ ವಿದ್ಯಾರ್ಥಿಗಳನ್ನು ಭವ್ಯ ದೇಶದ ಸತ್ಪ್ರಜೆಗಳನ್ನಾಗಿ ರೂಪಿಸುವ ಶಿಕ್ಷಕರಿಗೆ ವಂದನೆ ಸಲ್ಲಿಸುವ ನಿಟ್ಟಿನಲ್ಲಿ ಶಿಕ್ಷಕರ ದಿನಾಚರಣೆ ಅತಿ ಮಹತ್ವದ್ದಾಗಿದೆ.

Dr Sarvepalli Radhakrishnan

ಮಕ್ಕಳ ವಿದ್ಯಾಭ್ಯಾಸ ದೇಶದ ಭವಿಷ್ಯವನ್ನೇ ಬದಲಿಸಿಬಿಡಬಲ್ಲುದು. ಒಂದು ವೇಳೆ ಯಾವುದಾದರೂ ವ್ಯಕ್ತಿ ಜೀವನದಲ್ಲಿ ಅತ್ಯಂತ ಉನ್ನತ ಸ್ಥಾನ ಪಡೆದರೆ ಅದಕ್ಕೆ ತಳಹದಿಯಾದ ಶಿಕ್ಷಕರ ಶ್ರಮವನ್ನು ಯಾರೂ ಗಮನಿಸುವುದೇ ಇಲ್ಲ. ವಾಸ್ತವವಾಗಿ ಶಿಕ್ಷಕರು ಒಳ್ಳೆಯ ಮಾತಿನಲ್ಲಿ ಬಗ್ಗದ ಒರಟರನ್ನು ಪಳಗಿಸಲೆಂದೇ ಶಿಕ್ಷೆಯ ಮೊರೆ ಹೋಗುತ್ತಾರೆಯೇ ಹೊರತು ಶಿಕ್ಷೆ ನೀಡುವುದು ಯಾವ ಶಿಕ್ಷಕನಿಗೂ ಇಷ್ಟವಿಲ್ಲದ ಕಾರ್ಯ.

ಈ ದಿನ ಶಾಲೆಯ ಎಲ್ಲಾ ವಿದ್ಯಾರ್ಥಿಗಳಿಗೆ ತಮ್ಮ ನೆಚ್ಚಿನ ಶಿಕ್ಷಕರಿಗೆ ಉಡುಗೊರೆ ನೀಡಿ ಮೆಚ್ಚುಗೆ ಪಡೆಯುವ ಅವಕಾಶವಾದರೆ ಶಿಕ್ಷಕರಿಗೂ ತಾವು ವಿದ್ಯಾರ್ಥಿಗಳ ವಲಯದಲ್ಲಿ ಎಷ್ಟು ಜನಪ್ರಿಯರಾಗಿದ್ದೇವೆ ಎಂದು ಅರಿಯಲು ಸಾಧ್ಯವಾಗುತ್ತದೆ. ಕೆಲವು ವಿದ್ಯಾರ್ಥಿಗಳಂತೂ ತಮ್ಮ ನೆಚ್ಚಿನ ಶಿಕ್ಷಕರಿಗಾಗಿ ಕವನಗಳನ್ನೂ ಶುಭಸಂದೇಶಗಳನ್ನೂ ಬರೆದು ಪ್ರಕಟಿಸುವುದೂ ಇದೆ. ಪ್ರಾಚೀನ ಕಾಲದಲ್ಲಿ ಗುರು ತನ್ನ ಶಿಷ್ಯನನ್ನು 25 ವರ್ಷಗಳವರೆಗೂ ಸಲಹಿ, ತನ್ನ ವಿದ್ಯೆಯನ್ನೆಲ್ಲ ಧಾರೆ ಎರೆದು ಸಮಾಜದಲ್ಲೂ ಒಳ್ಳೆಯ ಪ್ರಜೆಯಾಗಿ ಬಾಳಲು ಮಾರ್ಗದರ್ಶನ ಮಾಡುತ್ತಿದ್ದ. ಶಿಷ್ಯನೂ ಅಷ್ಟೆ, ಗುರು ತೋರಿದ ದಾರಿಯಲ್ಲಿ ನಡೆದು ಜೀವನ ಸಾರ್ಥಕ ಮಾಡಿಕೊಳ್ಳುತ್ತಿದ್ದ. ಅದಕ್ಕಾಗಿಯೇ..

Teachers Day

ತನ್ನ ಗುರುಗಳಿಗೆ ತಿಳಿಯದ ವಿಷಯವೇ ಇಲ್ಲ ಎಂದು ಭಾವಿಸಿಕೊಳ್ಳುತ್ತದೆ. ಇಂಥ ಕಾಲದಲ್ಲಂತೂ ಶಿಕ್ಷಕನ ಜವಾಬ್ದಾರಿ ನಿಜವಾಗಿಯೂ ಮಹತ್ವದ್ದಾಗಿರುತ್ತದೆ. ಎಲ್ಲ ವಿಷಯಗಳಲ್ಲೂ ಸಮಾನತೆ ಕಾಯ್ದುಕೊಂಡು ಆರೋಗ್ಯಪೂರ್ಣ ಸಮಾಜಕ್ಕಾಗಿ ಆರೋಗ್ಯ ಪೂರ್ಣ ಪ್ರಜೆಯನ್ನು ರೂಪಿಸುವ ಜವಾಬ್ದಾರಿ ಗುರುವಿನದು. ಈ ಹಂತದಲ್ಲಿ ನೀಡಿದ ಶಿಕ್ಷಣವೇ ಮಗುವನ್ನು ಜವಾಬ್ದಾರಿಯುತ ಪ್ರಜೆಯಾಗಿ ಬೆಳೆಸುತ್ತದೆ. ಹಾಗಾಗಿ ಶಿಕ್ಷಕರೆಲ್ಲರೂ ಮೊದಲು ಉತ್ತಮ ಹಾಗೂ ಆದರ್ಶ ಶಿಕ್ಷಕರಾಗಿ ಎಲ್ಲರಿಗೂ ಮಾದರಿಯಾಗಬೇಕು.

More LIFE News

ಮನಸ್ಸಿಗೆ ಇಷ್ಟಬಂದಂತೆ ಉದ್ಯೋಗಿಗಳನ್ನು ತೆಗೆದಿದ್ದ ಎಲಾನ್ ಮಸ್ಕ್‌: ಟ್ವಿಟರ್‌ ಮಾಜಿ ಉದ್ಯೋಗಿ ನೀಡಿದರು ಮಾಸ್ಟರ್ ಸ್ಟ್ರೋಕ್

Teachers Day 2020: What is the importance of Teacher's Day?

ಮಂಕಿಫಾಕ್ಸ್ ಅಬ್ಬರಕ್ಕೆ ಆರೋಗ್ಯ ತುರ್ತು ಪರಿಸ್ಥಿತಿ ಘೋಷಣೆ..! ಭಾರತಕ್ಕೂ ಕಾದಿದೆ ಅಪಾಯ.!

ಮಂಕಿಫಾಕ್ಸ್ ಅಬ್ಬರಕ್ಕೆ ಆರೋಗ್ಯ ತುರ್ತು ಪರಿಸ್ಥಿತಿ ಘೋಷಣೆ..! ಭಾರತಕ್ಕೂ ಕಾದಿದೆ ಅಪಾಯ.!

ದಿನ ಭವಿಷ್ಯ: ಆಗಸ್ಟ್ 16, ವರಮಹಾಲಕ್ಷ್ಮಿ ಹಬ್ಬದ ಶುಭಾಶಯಗಳು, ಈ ದಿನ ರಾಶಿಫಲ

ದಿನ ಭವಿಷ್ಯ: ಆಗಸ್ಟ್ 16, ವರಮಹಾಲಕ್ಷ್ಮಿ ಹಬ್ಬದ ಶುಭಾಶಯಗಳು, ಈ ದಿನ ರಾಶಿಫಲ

ನಿಮ್ಮ  ದೇಹದ ಕುರಿತ ನಿಮಗೆ ಖಂಡಿತ ಅಚ್ಚರಿ ಮೂಡಿಸುವ ಸಂಗತಿಗಳು, ಸಕತ್‌ ಇಂಟೆರೆಸ್ಟಿಂಗ್ ಆಗಿದೆ

ನಿಮ್ಮ ದೇಹದ ಕುರಿತ ನಿಮಗೆ ಖಂಡಿತ ಅಚ್ಚರಿ ಮೂಡಿಸುವ ಸಂಗತಿಗಳು, ಸಕತ್‌ ಇಂಟೆರೆಸ್ಟಿಂಗ್ ಆಗಿದೆ

  • Don't Block
  • Block for 8 hours
  • Block for 12 hours
  • Block for 24 hours
  • Dont send alerts during 1 am 2 am 3 am 4 am 5 am 6 am 7 am 8 am 9 am 10 am 11 am 12 pm 1 pm 2 pm 3 pm 4 pm 5 pm 6 pm 7 pm 8 pm 9 pm 10 pm 11 pm 12 am to 1 am 2 am 3 am 4 am 5 am 6 am 7 am 8 am 9 am 10 am 11 am 12 pm 1 pm 2 pm 3 pm 4 pm 5 pm 6 pm 7 pm 8 pm 9 pm 10 pm 11 pm 12 am

facebookview

icon ham

ಕನ್ನಡದ ವಿವರಗಳು

Teachers Day Kannada Speech: ಶಿಕ್ಷಕರ ದಿನದಂದು ಭಾಷಣ ಹೇಗಿರಬೇಕು? ಇಲ್ಲಿದೆ ವಿದ್ಯಾರ್ಥಿಗಳಿಗಾಗಿ ಕನ್ನಡದಲ್ಲಿ ಶಿಕ್ಷಕರ ದಿನದ ಭಾಷಣ

Teachers day speech in kannada: ಶಿಕ್ಷಕರ ದಿನದಂದು ಬಹುತೇಕ ಶಾಲಾಕಾಲೇಜುಗಳಲ್ಲಿ ಕಾರ್ಯಕ್ರಮಗಳು, ಸ್ಪರ್ಧೆಗಳು ಇರುತ್ತವೆ. ವಿಶೇಷವಾಗಿ, ಈ ದಿನದಂದು ಭಾಷಣ ಸ್ಪರ್ಧೆ, ಚರ್ಚಾಗೋಷ್ಟಿಗಳು ಆಕರ್ಷಕವಾಗಿರುತ್ತವೆ. ನಾಳೆ ನಡೆಯಲಿರುವ ಶಿಕ್ಷಕರ ದಿನದಂದು "ಭಾಷಣʼ ಮಾಡಲು ನೀವು ಸಿದ್ಧತೆ ನಡೆಸುತ್ತಿದ್ದರೆ ಇಲ್ಲೊಂದಿಷ್ಟು ಐಡಿಯಾಗಳಿವೆ..

Teachers Day Kannada Speech: ಶಿಕ್ಷಕರ ದಿನದಂದು ಭಾಷಣ ಹೇಗಿರಬೇಕು? ಇಲ್ಲಿದೆ ವಿದ್ಯಾರ್ಥಿಗಳಿಗಾಗಿ ಕನ್ನಡದಲ್ಲಿ ಶಿಕ್ಷಕರ ದಿನದ ಭಾಷಣ

Teachers day speech in kannada: ಶಿಕ್ಷಕರ ದಿನದಂದು ಬಹುತೇಕ ಶಾಲಾಕಾಲೇಜುಗಳಲ್ಲಿ ಕಾರ್ಯಕ್ರಮಗಳು, ಸ್ಪರ್ಧೆಗಳು ಇರುತ್ತವೆ. ವಿಶೇಷವಾಗಿ, ಈ ದಿನದಂದು ಭಾಷಣ ಸ್ಪರ್ಧೆ, ಚರ್ಚಾಗೋಷ್ಟಿಗಳು ಆಕರ್ಷಕವಾಗಿರುತ್ತವೆ. ನಾಳೆ ನಡೆಯಲಿರುವ ಶಿಕ್ಷಕರ ದಿನದಂದು "ಭಾಷಣʼ ಮಾಡಲು ನೀವು ಸಿದ್ಧತೆ ನಡೆಸುತ್ತಿದ್ದರೆ ಇಲ್ಲೊಂದಿಷ್ಟು ಐಡಿಯಾಗಳಿವೆ.

ಪ್ರತಿವರ್ಷ ಸೆಪ್ಟೆಂಬರ್‌ ಐದರಂದು ಭಾರತದ ಎರಡನೇ ರಾಷ್ಟ್ರಪತಿ ಮತ್ತು ಶ್ರೇಷ್ಠ ವಿದ್ವಾಂಸರಾಗಿದ್ದ ಡಾ. ಸರ್ವೇಪಲ್ಲಿ ರಾಧಾಕೃಷ್ಣನ್‌ ಜನ್ಮ ದಿನವನ್ನು ಶಿಕ್ಷಕರ ದಿನಾಚರಣೆಯಾಗಿ ಆಚರಿಸಲಾಗುತ್ತದೆ. ಈ ದಿನದಂದು ಭಾಷಣ ಮಾಡುವಾಗ ಡಾ. ಸರ್ವೇಪಲ್ಲಿ ರಾಧಾಕೃಷ್ಣನ್‌ ಬಗ್ಗೆ, ಈಗಿನ ಶಿಕ್ಷಣ ವ್ಯವಸ್ಥೆ ಬಗ್ಗೆ, ಗುರುವಿನ ಮಹತ್ವದ ಬಗ್ಗೆ ನಿಮ್ಮ ಭಾಷಣದಲ್ಲಿ ವಿಷಯಗಳು ಇರಬೇಕು.

ನಿಮ್ಮ ಭಾಷಣದಲ್ಲಿ "ಗುರು ಬ್ರಹ್ಮ, ಗುರು ವಿಷ್ಣು, ಗುರು ದೇವೋ ಮಹೇಶ್ವರಃ, ಗುರು ಸಾಕ್ಷಾತ್ ಪರಬ್ರಹ್ಮ ತಸ್ಮೈ ಶ್ರೀ ಗುರುವೇ ನಮಃ.. " ಎಂಬ ಮಂತ್ರವಿದ್ದರೆ ಭಾಷಣದ ತೂಕ ಹೆಚ್ಚುತ್ತದೆ. ಭಾಷಣದ ಆರಂಭದಲ್ಲಿಯೇ ಇದನ್ನು ಹೇಳಲು ಮರೆಯಬೇಡಿ.

ಭಾಷಣ ಮಾಡುವಾಗ ಒಂದಿಷ್ಟು ಹಾವಭಾವ, ಆಂಗೀಕ ಅಭಿನಯಗಳ ಕುರಿತೂ ಗಮನ ನೀಡಿ. ಹಾಗಂತ, ರಾಜಕಾರಣಿಗಳ ರೀತಿ ತೋಳು ಏರಿಸಿ ಭಾಷಣ ಮಾಡಬೇಡಿ. ನಿಮಗೆ ಅಂಕ ನೀಡುವವರಿಗೆ ಅನುಕೂಲವಾಗುವಂತೆ, ನಗುಮುಖದಿಂದ, ಹಿತವಾದ ಭಾವದಲ್ಲಿ ಭಾಷಣ ಮಾಡಿ. ಸರಿ, ಭಾಷಣ ಶುರು ಮಾಡೋಣ. ಇಲ್ಲೊಂದು ಭಾಷಣವನ್ನು ಉದಾಹರಣೆಯಾಗಿ ನೀಡಲಾಗಿದೆ.

ಶಿಕ್ಷಕರ ದಿನದಂದು ಕನ್ನಡ ಭಾಷಣ

"ಗುರು ಬ್ರಹ್ಮ, ಗುರು ವಿಷ್ಣು, ಗುರು ದೇವೋ ಮಹೇಶ್ವರಃ, ಗುರು ಸಾಕ್ಷಾತ್ ಪರಬ್ರಹ್ಮ ತಸ್ಮೈ ಶ್ರೀ ಗುರುವೇ ನಮಃ.. ನನ್ನ ಪ್ರೀತಿಯ ಗೌರವಾನ್ವಿತ ಶಿಕ್ಷಕರಿಗೆ ಹಾಗೂ ಇಲ್ಲಿ ಉಪಸ್ಥಿತರಿರುವ ಎಲ್ಲರಿಗೂ ನಮಿಸುತ್ತ, ಶಿಕ್ಷಕರ ದಿನಾಚರಣೆಯೆಂಬ ಈ ಸುಂದರ ದಿನದ ಕುರಿತು ಮಾತನಾಡುತ್ತಿದ್ದೇನೆ.

ವಿದ್ಯೆ, ಬುದ್ಧಿ, ಉತ್ತಮ ದಾರಿ ತೋರಿಸುವ ಶಿಕ್ಷಕರು ವಿದ್ಯಾರ್ಥಿಗಳಿಗೆ ಆಸ್ತಿ. ನಮಗೆ ಬೋಧನೆಗಳ ಮೂಲಕ, ನೈತಿಕ ಮೌಲ್ಯಗಳ ಮೂಲಕ, ಶಿಸ್ತಿನ ಮೂಲಕ ಜೀವನ ಕಲಿಸುವ ನನ್ನ ಎಲ್ಲಾ ಪ್ರೀತಿಯ ಶಿಕ್ಷಕರಿಗೆ ಶಿಕ್ಷಕರ ದಿನದ ಶುಭಾಶಯಗಳು. ಮೊದಲಿಗೆ ನನ್ನ ಶಾಲೆಯ ಶಿಕ್ಷಕಶಿಕ್ಷಕಿಯರಾದ (ಕಡಿಮೆ ಸಂಖ್ಯೆಯಲ್ಲಿ ಶಿಕ್ಷಕ ಶಿಕ್ಷಕಿಯರಿದ್ದರೆ ಅವರ ಹೆಸರು ಹೇಳಿ) ಅವರಿಗೆ ನನ್ನ ವಂದನೆಗಳು.

ಭಾರತದ ಎರರಡನೇ ರಾಷ್ಟ್ರಪತಿ ಡಾ. ಸರ್ವೆಪಲ್ಲಿ ರಾಧಾಕೃಷ್ಣನ್‌ ಅವರ ಜನ್ಮ ದಿನವನ್ನು ಆಚರಿಸಲು ಭಾರತದಲ್ಲಿ ಪ್ರತಿವರ್ಷ ಸೆಪ್ಟೆಂಬರ್‌ 5ರಂದು ಶಿಕ್ಷಕರ ದಿನವನ್ನು ಆಚರಿಸಲಾಗುತ್ತದೆ. ಡಾ. ರಾಧಾಕೃಷ್ಣನ್‌ ಅವರು ಭಾರತದ ಮೊದಲ ಉಪರಾಷ್ಟ್ರಪತಿ ಮತ್ತು ಎರಡನೇ ರಾಷ್ಟ್ರಪತಿಯಾಗಿದ್ದರು. ಅವರು ಆದರ್ಶ ಶಿಕ್ಷಕರಾಗಿದ್ದರು. ಭಾರತ ರತ್ನ ಪುರಷ್ಕೃತರಾಗಿದ್ದರು. ಇತ್ತೀಚೆಗೆ ಭಾರತದ ರಾಷ್ಟ್ರಪತಿಯಾಗಿ ಆಯ್ಕೆಯಾಗಿದ್ದ ದ್ರೌಪದಿ ಮುರ್ಮು ಅವರು ಕೂಡ ಶಿಕ್ಷಕಿಯಾಗಿದ್ದರು ಎನ್ನುವುದನ್ನು ಈ ಸಂದರ್ಭದಲ್ಲಿ ನೆನಪಿಸಿಕೊಳ್ಳಬಹುದು.

ಇಂದಿನ ಮಕ್ಕಳೇ ಮುಂದಿನ ಜನಾಂಗ ಎಂದು ಹೇಳುತ್ತಾರೆ. ನಮ್ಮ ದೇಶದ ಭವಿಷ್ಯವು ಇಂದಿನ ಮಕ್ಕಳ ಕೈಯಲ್ಲಿದೆ. ವಿದ್ಯಾರ್ಥಿಗಳ ಭವಿಷ್ಯ ರೂಪಿಸುವಲ್ಲಿ ಶಿಕ್ಷಕರ ಪಾತ್ರ ಹಿರಿದಾದದ್ದು. ನಮ್ಮ ಯಶಸ್ಸಿಗೆ ಶಿಕ್ಷಕರ ಪಾತ್ರ ಅಮೂಲ್ಯ. ಅವರಿಗೆ ನನ್ನ ನಮನಗಳು.

ವಿದ್ಯಾರ್ಥಿಗಳ ಯಶಸ್ಸಿಗೆ ತಮ್ಮ ಜೀವನವನ್ನು ಮುಡಿಪಾಗಿಡುವ ಶಿಕ್ಷಕ-ಶಿಕ್ಷಕಿಯರ ಶ್ರಮವನ್ನು ಗೌರವಿಸಲು, ನಮ್ಮ ಜೀವನದಲ್ಲಿ ಅವರ ವಿಶೇಷ ಪಾತ್ರವನ್ನು ನೆನಪಿಸಲು ಶಿಕ್ಷಕರ ದಿನವನ್ನು ಆಚರಿಸಲಾಗುತ್ತದೆ. ಈ ದಿನದಂದು ವಿಶೇಷ ಚಟುವಟಿಕೆಗಳು, ಕಾರ್ಯಕ್ರಮಗಳು ನಡೆಯುತ್ತವೆ. ಭಾರತದಲ್ಲಿ ಮಾತ್ರವಲ್ಲದೆ ಜಗತ್ತಿನಾದ್ಯಂತ ಶಿಕ್ಷಕರ ದಿನವನ್ನು ಆಚರಿಸಲಾಗುತ್ತದೆ.

1994ರಲ್ಲಿ ಯುನೆಸ್ಕೊ ಅಧಿಕೃತವಾಗಿ ಅಕ್ಟೋಬರ್‌ 5 ಅನ್ನು ಶಿಕ್ಷಕರ ದಿನವೆಂದು ಘೋಷಿಸಿದೆ. ಒಂದು ಅಕ್ಷರ ಕಲಿಸಿದವರು ಗುರು ಎಂದು ಭಾರತೀಯರು ನಂಬಿದ್ದಾರೆ. ನಮಗೆ ಪ್ರತಿದಿನ, ಹಲವು ವರ್ಷಗಳ ಕಾಲ ನಿರಂತರವಾಗಿ ಬೋಧನೆ ಮಾಡುವ ಶಿಕ್ಷಕ-ಶಿಕ್ಷಕಿಯರ ಪಾತ್ರ ಹಿರಿದಾದದ್ದು. ಶಿಕ್ಕರು ನಮ್ಮ ಬದುಕಿನ ಆಧಾರ ಸ್ತಂಭಗಳಾಗಿದ್ದು, ವಿದ್ಯಾರ್ಥಿ ಜೀವನದಲ್ಲಿ ಮಾರ್ಗದರ್ಶನ ನೀಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತಾರೆ. ಅವರು ನಮಗೆ ಬದುಕಿನ ಹಾದಿ ತೋರಿಸಲು ಶ್ರಮ ವಹಿಸುತ್ತಾರೆ.

ಶಿಕ್ಷಕರು ಕೇವಲ ಪಠ್ಯ ಪುಸ್ತಕದಲ್ಲಿರುವ ಪಾಠವನ್ನು ಮಾತ್ರ ಹೇಳದೆ ನಿರಂತರವಾಗಿ ತಮ್ಮ ಅನುಭವಗಳು, ಸಮಾಜದ ಕುರಿತು ಹೇಳುತ್ತಾರೆ. ವಿಶೇಷವಾಗಿ ನಮಗೆ ನೈತಿಕ ಶಿಕ್ಷಣ ನೀಡುತ್ತಾರೆ. ವಿದ್ಯಾರ್ಥಿಗಳು ತಪ್ಪು ಮಾಡಿದರೆ ಅದನ್ನು ಸೂಕ್ಷ್ಮವಾಗಿ ತಿದ್ದುತ್ತಾರೆ. ಈಗ ವಿದ್ಯಾರ್ಥಿಗಳು ಗೂಗಲ್‌ ಮೂಲಕ ಕಲಿಯಲು ಅವಕಾಶವಿದ್ದರೂ, ನಮ್ಮ ಶಿಕ್ಷಕ-ಶಿಕ್ಷಕಿಯರ ನಿಜವಾದ ಜ್ಞಾನದ ಮುಂದೆ ಯಾವುದೇ ಗೂಗಲ್‌ ಕೂಡ ಸಮನಲ್ಲ ಎಂದು ನಾನು ಈ ಸಂದರ್ಭದಲ್ಲಿ ಹೇಳಲು ಬಯಸುತ್ತೇನೆ.

ಶಿಕ್ಷಕ-ಶಿಕ್ಷಕಿಯರು ಒಬ್ಬ ವಿದ್ಯಾರ್ಥಿಯನ್ನು ದೇಶದ ಉತ್ತಮ ಪ್ರಜೆಯನ್ನಾಗಿ ಮಾಡುತ್ತಾರೆ. ಅವರಲ್ಲಿ ಎಲ್ಲಾ ತರಹದ ಆತ್ಮ ವಿಶ್ವಾಸವನ್ನು ತುಂಬಿ ಸಮಾಜದಲ್ಲಿ ಒಬ್ಬ ಸತ್ ಪ್ರಜೆಯಾಗುವಂತೆ ಮಾಡುತ್ತಾರೆ. ಜೀವನದಲ್ಲಿ ಸೋಲು ಗೆಲವನ್ನು ಸಮಾನವಾಗಿ ಸ್ವೀಕರಿಸುವುದನ್ನು ಕಲಿಸುವವರು ಗುರುಗಳು. ಅಂತಹ ಶಿಕ್ಷಕರನ್ನು ನಾವೆಲ್ಲರೂ ಪಡೆದಿರುವುದು ನಮ್ಮ ಪುಣ್ಯ. 'ಶಿಕ್ಷಕ' ಅನ್ನೋದು ಕೇವಲ ಬರೀ 3 ಅಕ್ಷರಗಳ ಪದವಲ್ಲ. ಅದು ಇಡೀ ಜಗತ್ತನ್ನೇ ಬೆಳಗುವ ಮತ್ತು ಬೆಳಗಿಸುವ ಪದ.

ನನಗೆ ಉತ್ತಮ ಶಿಕ್ಷಕ-ಶಿಕ್ಷಕಿಯರನ್ನು ನೀಡಿದ ಈ ಸಂಸ್ಥೆಗೆ ಧನ್ಯವಾದಗಳು. ಪ್ರತಿದಿನ ನಮ್ಮೆಲ್ಲ ತಪ್ಪುಗಳನ್ನು ತಿದ್ದಿ ಅಕ್ಕರೆಯಿಂದ ಬೋಧಿಸುವ ಶಿಕ್ಷಕಶಿಕ್ಷಕಿಯರ ಪಾದಗಳಿಗೆ ನಮಸ್ಕಾರಗಳು. ನಮ್ಮನ್ನು ಉತ್ತಮ ವ್ಯಕ್ತಿಗಳಾಗಿ ಬೆಳೆಸಲು ಕಷ್ಟಪಡುವ, ಸಹಾಯ ಮಾಡುವ, ನಮ್ಮ ಜೀವನದ ಆದರ್ಶರಾದ ನಿಮಗೆ ನಮಿಸುತ್ತ, ಶಿಕ್ಷಕರ ದಿನದಂದು ಭಾಷಣ ಮಾಡಲು ಅವಕಾಶ ನೀಡಿದ್ದಕ್ಕೆ ಧನ್ಯವಾದ ನೀಡುತ್ತಿದ್ದೇನೆ. ಎಲ್ಲರಿಗೂ ಶಿಕ್ಷಕರ ದಿನದ ಶುಭಾಶಯಗಳು- ಜೈ ಹಿಂದ್, ಜೈ ಭಾರತಾಂಬೆ, ವಂದೇ ಮಾತರಂ.

  • TN Navbharat

kannada news

Teachers Day Quotes and Wishes in Kannada: ಬದುಕೆಂಬ ಹಾದಿಗೆ ಬೆಳಕಾದ ಗುರು; ಇಲ್ಲಿವೆ ಶಿಕ್ಷಕ ದಿನಾಚರಣೆಯ ಶುಭಾಶಯಗಳು

author-479266207

Updated Aug 20, 2024, 18:14 IST

Teachers Dya 2024

Teachers Dya 2024

ಶಿಕ್ಷಕರ ದಿನಾಚರಣೆ 2024ರ ಶುಭಾಶಯಗಳು:

Bengaluru Power Cut ರಾಜ್ಯ ರಾಜಧಾನಿ ಜನರೇ ಎಚ್ಚರ ನಾಳೆ ನಾಡಿದ್ದು ಈ ಏರಿಯಾಗಳಲ್ಲಿ ಪವರ್ ಕಟ್!

Bengaluru Power Cut: ರಾಜ್ಯ ರಾಜಧಾನಿ ಜನರೇ ಎಚ್ಚರ: ನಾಳೆ, ನಾಡಿದ್ದು ಈ ಏರಿಯಾಗಳಲ್ಲಿ ಪವರ್ ಕಟ್..!

Women Safety Initiatives ಮಹಿಳೆಯರು ಮತ್ತು ಯುವತಿಯರ ಸುರಕ್ಷತೆ ಭದ್ರತೆಗೆ ಕೇಂದ್ರ ಸರ್ಕಾರದ ಈ ಉಪಕ್ರಮಗಳ ಬಗ್ಗೆ ತಿಳ್ಕೊಳ್ಳಿ

Women Safety Initiatives: ಮಹಿಳೆಯರು ಮತ್ತು ಯುವತಿಯರ ಸುರಕ್ಷತೆ, ಭದ್ರತೆಗೆ ಕೇಂದ್ರ ಸರ್ಕಾರದ ಈ ಉಪಕ್ರಮಗಳ ಬಗ್ಗೆ ತಿಳ್ಕೊಳ್ಳಿ..

Sleep Anxiety ರಾತ್ರಿ ಕಾಡುವ ಆತಂಕ-ಒತ್ತಡ ನಿಮ್ಮ ನಿದ್ದೆಯನ್ನ ಕಸಿಯುತ್ತಿದೆಯಾ;  ಈ ಟಿಪ್ಸ್ ಫಾಲೋ ಮಾಡಿಕಣ್ತುಂಬ ನಿದ್ದೆ ಮಾಡಿ!

Sleep Anxiety: ರಾತ್ರಿ ಕಾಡುವ ಆತಂಕ-ಒತ್ತಡ ನಿಮ್ಮ ನಿದ್ದೆಯನ್ನ ಕಸಿಯುತ್ತಿದೆಯಾ?; ಈ ಟಿಪ್ಸ್‌ ಫಾಲೋ ಮಾಡಿ..ಕಣ್ತುಂಬ ನಿದ್ದೆ ಮಾಡಿ..!

Women Safety in India ಭಾರತದಲ್ಲಿ ಮಹಿಳಾ ಸುರಕ್ಷತೆ ಕೊರತೆಯ ಹಿಂದಿನ 6 ಕಾರಣಗಳು

Women Safety in India: ಭಾರತದಲ್ಲಿ ಮಹಿಳಾ ಸುರಕ್ಷತೆ ಕೊರತೆಯ ಹಿಂದಿನ 6 ಕಾರಣಗಳು..

Janmashtami 2024 ಭಾರತ ಮಾತ್ರವಲ್ಲ ಈ ದೇಶದಲ್ಲೂ ಕೃಷ್ಣ ಜನ್ಮಾಷ್ಟಮಿಯನ್ನ ಅದ್ಧೂರಿಯಾಗಿ ಆಚರಿಸಲಾಗುತ್ತೆ; ಹಾಡು-ಡ್ಯಾನ್ಸ್ ಜೋರಾಗಿರುತ್ತೆ!

Janmashtami 2024: ಭಾರತ ಮಾತ್ರವಲ್ಲ ಈ ದೇಶದಲ್ಲೂ ಕೃಷ್ಣ ಜನ್ಮಾಷ್ಟಮಿಯನ್ನ ಅದ್ಧೂರಿಯಾಗಿ ಆಚರಿಸಲಾಗುತ್ತೆ; ಹಾಡು-ಡ್ಯಾನ್ಸ್‌ ಜೋರಾಗಿರುತ್ತೆ..!

ಕೊನೆಗೂ ಲಾಂಚ್ ಆಯ್ತು ಒಪ್ಪೋ F27 5G ಸ್ಮಾರ್ಟ್ಫೋನ್! ಒನ್ಪ್ಲಸ್ ನಥಿಂಗ್ ಫೋನ್ಗೆ ನಡುಕ ಶುರು

ಕೊನೆಗೂ ಲಾಂಚ್‌ ಆಯ್ತು ಒಪ್ಪೋ F27 5G ಸ್ಮಾರ್ಟ್‌ಫೋನ್‌! ಒನ್‌ಪ್ಲಸ್‌, ನಥಿಂಗ್‌ ಫೋನ್‌ಗೆ ನಡುಕ ಶುರು

Best Lamp Oil For Worship ದೀಪ ಹಚ್ಚಲು ಯಾವ ಎಣ್ಣೆ ಬಳಸಬೇಕು ಈ ತಪ್ಪನ್ನು ಮಾಡಲೇಬೇಡಿ

Best Lamp Oil For Worship: ದೀಪ ಹಚ್ಚಲು ಯಾವ ಎಣ್ಣೆ ಬಳಸಬೇಕು? ಈ ತಪ್ಪನ್ನು ಮಾಡಲೇಬೇಡಿ

ನನ್ನ ಮತ್ತು ಕುಮಾರಸ್ವಾಮಿ ಮಧ್ಯೆ ರಾಜ್ಯಪಾಲರು ಹೀಗ್ಯಾಕೆ ತಾರತಮ್ಯ ಮಾಡ್ತಾರೆ; ಸಿಎಂ ಸಿದ್ದರಾಮಯ್ಯ ಪ್ರಶ್ನೆ

ನನ್ನ ಮತ್ತು ಕುಮಾರಸ್ವಾಮಿ ಮಧ್ಯೆ ರಾಜ್ಯಪಾಲರು ಹೀಗ್ಯಾಕೆ ತಾರತಮ್ಯ ಮಾಡ್ತಾರೆ?; ಸಿಎಂ ಸಿದ್ದರಾಮಯ್ಯ ಪ್ರಶ್ನೆ

Bengaluru Power Cut ರಾಜ್ಯ ರಾಜಧಾನಿ ಜನರೇ ಎಚ್ಚರ ನಾಳೆ ನಾಡಿದ್ದು ಈ ಏರಿಯಾಗಳಲ್ಲಿ ಪವರ್ ಕಟ್!

Essay on Teachers Day for Students and Children

500+ words essay on teachers day.

A   Teacher is someone who acts as a guide and inspiration to people – both young and old. He/she is charged with the responsibility of creating awareness as well as opening the mind of people by instilling values, morals, and ethics. Teachers efforts are recognized during the teacher’s day. They shape minds, and we annually celebrate their contribution to the development of society in the form of Teachers’ day across the world. However, We celebrate The International Teachers Day on October 5 th annually.

essay on teachers day

Teachers’ Day in India

Teachers are respected and honored for their important contribution in shaping individuals. 5 th of September is annually celebrated as Teachers’ day in India. This is actually the birthday of the former President of India, Dr. Sarvepalli Radhakrishnan .

Why Teachers’ Day?

The contributions and efforts made by teachers never go unnoticed. This led to the inauguration of the Teacher’s day which seeks to celebrate the efforts made by the teachers. In India, we celebrate the teacher’s day on the birthday of Dr. Sarvepalli Radhakrishnan who was known as a man of many great qualities and attributes.

Teachers play many roles in overall development such as:

  • They guide children and students to  leadership skills
  • They instill discipline into young people molding them into future
  • Also, they provide their students with spiritual and emotional guidance.

Teachers also come across numerous challenges in their day to day activities such as the unappreciative culture by the community as well as dealing with disciplinary issues of their students.

Get the huge list of more than 500 Essay Topics and Ideas

What can we do on Teachers’ Day?

A thank-you can go a long way. In our busy lives, we have come to forget expressing gratitude. Many studies have come up explaining the benefits that gratitude can have on the one who expresses it and on the one who receives it. We can take this opportunity as a day to thank our teachers and express our love and care for them.

  • We can suggest and provide assistance by making use of the skills that we have learned over these years.
  • Also, we can give them a visit on this day and share with them our experiences. This will for sure make them happy and proud of their efforts.
  • We can present a small token of appreciation, something that they could keep as a memory like a pen or a planner or something that would be useful for them.
  • We should also seek their blessings and let them know that we are always there for them when they need us.
  • Students can collectively gift them books and other materials and organize a get-together especially if the class has graduated.

Time spent with them and gratitude expressed would be a great gesture to make teachers happy and proud. It is very important to recognize their contribution to molding our personality.

Teachers play an important role in the development of any country . This is why it is vital to set aside a day when the teachers are given the recognition they deserve. We celebrate Teachers’ day to honor the contribution of Teachers in our lives. Duties undertaken by teachers in the upbringing of children is immense and thus being recognized with teachers’ day is a step towards recognizing the profession and the role they play in society.

Customize your course in 30 seconds

Which class are you in.

tutor

  • Travelling Essay
  • Picnic Essay
  • Our Country Essay
  • My Parents Essay
  • Essay on Favourite Personality
  • Essay on Memorable Day of My Life
  • Essay on Knowledge is Power
  • Essay on Gurpurab
  • Essay on My Favourite Season
  • Essay on Types of Sports

Leave a Reply Cancel reply

Your email address will not be published. Required fields are marked *

Download the App

Google Play

IMAGES

  1. ಶಿಕ್ಷಕರ ದಿನಾಚರಣೆ

    about teachers day in kannada essay

  2. Teachers Day Essay in Kannada

    about teachers day in kannada essay

  3. [Best Answer] Essay on teachers day in kannada language

    about teachers day in kannada essay

  4. Essay On Teachers Day In Kannada Language

    about teachers day in kannada essay

  5. Teachers Day 10 lines essay|teachers day essay in Kannada|10 lines teachers day essay in Kannada|

    about teachers day in kannada essay

  6. Essay and Speech on Teachers Day in Kannada.pdf

    about teachers day in kannada essay

COMMENTS

  1. ಶಿಕ್ಷಕರ ದಿನಾಚರಣೆ ಪ್ರಬಂಧ

    Essay On Teachers Day in Kannada ಮುನ್ನುಡಿ : ಭಾರತದಲ್ಲಿ ಪ್ರಾಚೀನ ಕಾಲದಿಂದಲೂ ಗುರು-ಶಿಕ್ಷಕರ ಸಂಪ್ರದಾಯ ನಡೆದುಕೊಂಡು ಬಂದಿದೆ.

  2. Teachers Day Essay in Kannada

    Teachers Day Essay in Kannada ಶಿಕ್ಷಕರ ದಿನಾಚರಣೆ ಬಗ್ಗೆ ಪ್ರಬಂಧ shikshakara dinacharane bagge prabandha in kannada.

  3. ಶಿಕ್ಷಕರ ದಿನಾಚರಣೆ ಪ್ರಬಂಧ Essay on Teachers day in Kannada Language

    Students can use this Dr. Sarvapalli Radhakrishnan Biography in Kannada Language / Teachers day kannada essay to complete their homework. ಶಿಕ್ಷಕರ ದಿನಾಚರಣೆ ಪ್ರಬಂಧ Essay on Teachers day in Kannada Language

  4. Teachers Day Essay: ನೀವು ಶಿಕ್ಷಕರ ದಿನಾಚರಣೆ ಪ್ರಬಂಧ ಸ್ಪರ್ಧೆಯಲ್ಲಿ

    ಶಿಕ್ಷಕರ ದಿನಾಚರಣೆಯು ಶಿಕ್ಷಕರನ್ನು ಗೌರವಿಸಲು ಮತ್ತು ಶಿಕ್ಷಣಕ್ಕೆ ...

  5. ಶಿಕ್ಷಕರ ಬಗ್ಗೆ ಪ್ರಬಂಧ

    ಶಿಕ್ಷಕರ ಬಗ್ಗೆ ಪ್ರಬಂಧ Essay On Teacher Shikshakara Bagge Prabandha in Kannada

  6. 10 ಸಾಲುಗಳ ಶಿಕ್ಷಕರ ದಿನಾಚರಣೆ ಪ್ರಬಂಧ

    10 ಸಾಲುಗಳ ಶಿಕ್ಷಕರ ದಿನಾಚರಣೆ ಪ್ರಬಂಧ | 10 lines Essay on Teacher's Day in Kannada | Shikshakara Dinacharane | @learnspeechessayinkannada

  7. Teachers Day 2022 : ಶಿಕ್ಷಕರ ದಿನದ ಇತಿಹಾಸ, ಥೀಮ್ ಮತ್ತು ಮಹತ್ವವೇನು

    Teachers day is on september 5. Here is the history, theme, importance and significance of the day in kannada. ಶಿಕ್ಷಕರ ದಿನವನ್ನು ...

  8. Teachers Day 2022,Teachers Day 2022: ಇಂದು ಶಿಕ್ಷಕರ ದಿನಾಚರಣ.. ಈ ದಿನದ

    Teachers Day 2022 Significance And History In Kannada Teachers Day 2022: ಇಂದು ಶಿಕ್ಷಕರ ದಿನಾಚರಣ.. ಈ ದಿನದ ಇತಿಹಾಸ, ಮಹತ್ವದ ಬಗ್ಗೆ ಇಲ್ಲಿದೆ ಸಂಪೂರ್ಣ ಮಾಹಿತಿ

  9. Essay On Teachers' Day 2022

    Teachers day is celebrated on september 5. Here is the information to write essay on teachers day for students and children in kannada.ಶಿಕ್ಷಕರ ...

  10. ಶಿಕ್ಷಕ ದಿನಾಚರಣೆ ಪ್ರಬಂಧ

    #ಶಿಕ್ಷಕದಿನಾಚರಣೆ #teachersday2022 #teachersdayessay @Essayspeechinkannada in this video I explain about teachers day essay writing in ...

  11. Teachers Day 2023: ಶಿಕ್ಷಕರ ದಿನದ ಇತಿಹಾಸ, ಮಹತ್ವ ಮತ್ತು ಆಚರಣೆಗಳು

    Teachers Day 2023: Know the history, significance and celebrations of Teacher's Day in kannada. ಶಿಕ್ಷಕರ ದಿನ 2023: ಶಿಕ್ಷಕರ ದಿನದ ಇತಿಹಾಸ, ಮಹತ್ವ ಮತ್ತು ಆಚರಣೆಗಳು ಕನ್ನಡದಲ್ಲಿ ತಿಳಿಯಿರಿ

  12. ಶಿಕ್ಷಕರ ಮಹತ್ವ ಪ್ರಬಂಧ

    1178. ಶಿಕ್ಷಕರ ಮಹತ್ವ ಪ್ರಬಂಧ Importance Of Teachers Essay In Kannada. ಶಿಕ್ಷಕರ ಮಹತ್ವ ಪ್ರಬಂಧ Importance Of Teachers Essay In Kannada Shikshakara Mahatva Prabanda. ನಾವು ಈ ಲೇಖನದಲ್ಲಿ ಶಿಕ್ಷಕರ ಮಹತ್ವ ಹಾಗೂ ಅವರು ...

  13. ಶಿಕ್ಷಕರ ಬಗ್ಗೆ ಪ್ರಬಂಧ

    ಭಾರತದ ರಾಷ್ಟ್ರೀಯ ಹಬ್ಬಗಳ ಕುರಿತು ಪ್ರಬಂಧ. ಪರಿಸರ ಸಂರಕ್ಷಣೆ ಪ್ರಬಂಧ ಕನ್ನಡದಲ್ಲಿ. Essay Essay on Teachers in Kannada Prabandha ಪ್ರಬಂಧ ಶಿಕ್ಷಕರ ಬಗ್ಗೆ ಪ್ರಬಂಧ ಶಿಕ್ಷಕರು ...

  14. ಪ್ರಬಂಧ : ಶಿಕ್ಷಕರ ದಿನಾಚರಣೆ || Essay on Teachers Day In Kannada || Dr. S

    ಪ್ರಬಂಧ : ಶಿಕ್ಷಕರ ದಿನಾಚರಣೆ || Essay on Teachers Day In Kannada || Dr. S. Radhakrishnan || Dr. Sarvepalli Radhakrishnan ...

  15. ಶಿಕ್ಷಕರ ದಿನಾಚರಣೆ 2020: ನಮ್ಮೆಲ್ಲರ ಗುರುವಿನ ಹಿರಿಮೆ ಸ್ಮರಿಸುವ ದಿನ

    Teachers Day 2020: What is the importance of Teacher's Day? A teacher is one significant person in a student"s life. This is because apart from parents and family the child spends most of the time at school and it is in school that the character of a child is molded.

  16. Kannada Essay on Teachers day / Dr. Sarvapalli Radhakrishnan

    e-ಕನ್ನಡ » Kannada Essays (ಪ್ರಬಂಧಗಳು) » Kannada Essay on Teachers day / Dr. Sarvapalli Radhakrishnan - ಡಾ ...

  17. Teachers Day Speech in Kannada ಕನ್ನಡದಲ್ಲಿ ಶಿಕ್ಷಕರ ದಿನದ ಭಾಷಣ

    Check Teachers Day Speech in Kannada (ಕನ್ನಡದಲ್ಲಿ ಶಿಕ್ಷಕರ ದಿನದ ಭಾಷಣ) and know how to express your gratitude and inspire everyone. ... Rainy Days Essay Climate Change Essay International Yoga Day Essay Essay on Internet Essay On Environment Social Issues Essay Aim of My Life Essay Summer Season ...

  18. Teachers Day Kannada Speech: ಶಿಕ್ಷಕರ ದಿನದಂದು ಭಾಷಣ ಹೇಗಿರಬೇಕು? ಇಲ್ಲಿದೆ

    Teachers day speech in kannada: ಶಿಕ್ಷಕರ ದಿನದಂದು ಬಹುತೇಕ ಶಾಲಾಕಾಲೇಜುಗಳಲ್ಲಿ ...

  19. ಶಿಕ್ಷಕರ ದಿನಾಚರಣೆ

    #teachersday #teachersday2022 #teachersdayspeechinkannada @Essayspeechinkannadathis video I explain about teachers day essay writing in Kannada, 10 lines abo...

  20. Teachers Day Quotes and Wishes in Kannada: ಬದುಕೆಂಬ ಹಾದಿಗೆ ಬೆಳಕಾದ ಗುರು

    happy teachers day 2024 quotes and wishes status messages in kannada ಭಾರತದಲ್ಲಿ ಪ್ರಸಿದ್ಧ ತತ್ವಜ್ಞಾನಿ, ವಿದ್ವಾಂಸ ಮತ್ತು ಭಾರತದ ಎರಡನೇ ರಾಷ್ಟ್ರಪತಿ ಡಾ. ... Teachers Day Quotes and Wishes in Kannada: ಭಾರತದಲ್ಲಿ ...

  21. Essay on teachers day in kannada language

    Find more answers. plus. Ask your question. Essay on teachers day in kannada language - 806002.

  22. ಸರ್ವೆಪಲ್ಲಿ ರಾಧಾಕೃಷ್ಣನ್

    #TeachersDayKannada #TeachersDayKannadaessay #TeachersDayKannadaspeechin this video explain about teachers day essay in Kannada, sarvepalli radhakrishnan in ...

  23. Essay on Teachers Day for Students and Children

    500+ Words Essay on Teachers Day. A Teacher is someone who acts as a guide and inspiration to people - both young and old. He/she is charged with the responsibility of creating awareness as well as opening the mind of people by instilling values, morals, and ethics. Teachers efforts are recognized during the teacher's day.

  24. Teachers Day 10 lines essay|teachers day essay in Kannada|10 ...

    #TeachersDay #Teachersdayspeechinkannada #TeachersDay10linesessayinKannadain this video I explain about teachers day in Kannada, Teachers Day essay in Kan...